
ಏಕೋ ಏನೋ ರಾಹುಲ್ ಗಾಂಧಿ ಜಾಸ್ತಿ ನಂಬುತ್ತಿದ್ದ ಮಿತ್ರರೇ ಕೈಕೊಡುತ್ತಿದ್ದಾರೆ. ಮೊದಲಿಗೆ ಜ್ಯೋತಿರಾದಿತ್ಯ ಸಿಂಧಿಯಾ, ಈಗ ಸಚಿನ ಪೈಲಟ್. ಆದರೆ ಜ್ಯೋತಿರಾದಿತ್ಯ ಕಾಂಗ್ರೆಸ್ ಸರ್ಕಾರ ಬೀಳಿಸಿ ಹೊರಗೆ ಬಂದರೆ, ಸಚಿನ್ ಪೈಲಟ್ ತಾನೇ ಕಟ್ಟಿದ ಮನೆಯಲ್ಲಿ ಏಕಾಂಗಿ ಆಗಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ನ ಭವಿಷ್ಯದ ಅನಿಶ್ಚಯತೆಯ ಕಾರಣದಿಂದ ಹುಟ್ಟಿಕೊಂಡ ತಳಮಳ, ಅಧಿಕಾರ ಹಿಡಿಯುವ ಗಡಿಬಿಡಿ. ಹೀಗಾಗಿಯೇ ಎದುರಾಳಿ ನಿಗದಿ ಮಾಡಿದ ಮಹೂರ್ತದಲ್ಲಿ ಯುದ್ಧ ಮಾಡಲು ಹೋಗಿ, ಅನವಶ್ಯಕ ಗಡಿಬಿಡಿಯಿಂದ ಸಚಿನ್ ಇದ್ದ ಅಧಿಕಾರ ಜೊತೆಗೆ ಪ್ರತಿಷ್ಠೆ ಕೂಡ ಕಳೆದುಕೊಂದಿದ್ದಾರೆ. ಆ ಕಡೆ ಬಿಜೆಪಿ ಬಾಗಿಲು ತೆರೆಯದೆ, ಈ ಕಡೆ ಕಾಂಗ್ರೆಸ್ ಬಾಗಿಲು ಮುಚ್ಚಿ ಕಾಂಗ್ರೆಸನ ಭವಿಷ್ಯ ಎನಿಸಿಕೊಳ್ಳುತ್ತಿದ್ದ ಸಚಿನ 42ನೇ ವಯಸ್ಸಿಗೆ ಗೋಡೆಗೆ ಹೋಗಿ ಗುದ್ದಿಕೊಂಡಿದ್ದಾರೆ.
ಆ ಒಂದು ಅಂಶ ಬಯಲಾಗುವವರೆಗೆ ಚೀನಾ ಬೆದರಿತು ಎನ್ನುವುದು ತಪ್ಪಾದೀತು!
ಆದರೆ ಏನೂ ಮಾಡಲು ಆಗದೆ, ಹೇಳಲೂ ಆಗದೆ, ಜಗಳ ಬಗೆಹರಿಸಲೂ ಆಗದೇ ತನ್ನದೇ ಪಿತ್ರಾರ್ಜಿತ ಪಕ್ಷವಾದರೂ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲದ ರಾಹುಲ್ ಮತ್ತೊಬ್ಬ ಬುದ್ಧಿವಂತ ರಾಜಕಾರಣಿಯನ್ನು ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿಯ ಪರಿಸ್ಥಿತಿ ಶೇಕ್ಸ್ಪಿಯರ್ನ ನಾಟಕದ ಕಿಂಗ್ ಲಿಯರ್ನ ತರಹ ಆಗಿದೆ. ರಾಜ ನಂಬುತ್ತಿದ್ದ ಒಬ್ಬೊಬ್ಬರೇ ತಮ್ಮ ತಮ್ಮ ಮಹತ್ವಾಕಾಂಕ್ಷೆಗಳಿಗೆ ದೂರವಾದಾಗ, ರಾಜನನ್ನು ಯಾವತ್ತಿಗೂ ಇಷ್ಟಪಡದವರೇ ಸುತ್ತಮುತ್ತ ತುಂಬಿಕೊಳ್ಳುತ್ತಾ ಹೋಗುತ್ತಾರೆ.
ಆದರೆ ಇದರಲ್ಲಿ ರಾಜ್ಯ ಶಿಥಿಲವಾಗುತ್ತಾ ಹೋಗುತ್ತದೆ. ಬ್ರಿಟನ್ನಲ್ಲಿ ನಡೆಯಿತು ಎನ್ನಲಾದ ಈ ಕಥೆಯ ರೀತಿ ರಾಹುಲ್ ಅವರ ಅಯಶಸ್ವಿ ನಾಯಕತ್ವದಿಂದ ಕಾಂಗ್ರೆಸ್ಸನ್ನು ಒಬ್ಬೊಬ್ಬರೇ ಬಿಟ್ಟು ದೂರ ಹೋಗುತ್ತಿದ್ದಾರೆ. ತಾತ್ಕಾಲಿಕವಾಗಿ ಜಗಳದಲ್ಲಿ ಒಬ್ಬರು ಗೆದ್ದು, ಇನ್ನೊಬ್ಬರು ಸೋತರೂ ಶಿಥಿಲವಾಗುವುದು ಮಾತ್ರ ಕಾಂಗ್ರೆಸ್ ಪಕ್ಷ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.