ಚಾರಿಟಿ ಚೆಸ್ ಪಂದ್ಯ: ಕ್ಷಮೆ ಕೇಳಿದ ಝೆರೋಧ ಮುಖ್ಯಸ್ಥನಿಗೆ ನಿಷೇಧ ಶಿಕ್ಷೆ!

Published : Jun 14, 2021, 09:53 PM IST
ಚಾರಿಟಿ ಚೆಸ್ ಪಂದ್ಯ: ಕ್ಷಮೆ ಕೇಳಿದ ಝೆರೋಧ ಮುಖ್ಯಸ್ಥನಿಗೆ ನಿಷೇಧ ಶಿಕ್ಷೆ!

ಸಾರಾಂಶ

ಕೋವಿಡ್ ಪರಿಹಾರಕ್ಕಾಗಿ ಚಾರಿಟಿ ಚೆಸ್ ಟೂರ್ನಿ ದಿಗ್ಗಜ ವಿಶ್ವನಾಥನ್ ಆನಂದ್ ವಿರುದ್ಧ ಸೆಲೆಬ್ರೆಟಿಗಳ ಟೆಸ್ ಮೋಸದಾಟದಲ್ಲಿ ವಿಶಿ ಸೋಲಿಸಿದ ಝೆರೋಧ ಮುಖ್ಯಸ್ಥನಿಗೆ ಶಿಕ್ಷೆ

ನವದೆಹಲಿ(ಜೂ.14): ಕೋವಿಡ್ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಆಯೋಜಿಸಿದ ವರ್ಚುವಲ್ ಚಾರಿಟಿ ಪಂದ್ಯ ಅತ್ಯಂತ ಯಶಸ್ವಿಯಾಗಿದೆ. ಆದರೆ ಈ ಟೂರ್ನಿ ಇದೀಗ ವಿವಾದಕ್ಕೆ ಕಾರಣಾಗಿದೆ. ದಿಗ್ಗಜ ವಿಶ್ವನಾಥನ್ ಆನಂದ್ ವಿರುದ್ಧ ಚೆಸ್ ಆಡಲು ಬಾಲಿವುಡ್ ನಟ ಅಮಿರ್ ಖಾನ್, ರಿತೇಶ್ ದೇಶ್‌ಮುಖ್, ಕಿಚ್ಚ ಸುದೀಪ್, ಕ್ರಿಕೆಟಿಗ ಯಜುವೇಂದ್ರ ಚಹಾಲ್ ಸೇರಿದಂತೆ ಹಲವ ಸೆಲೆಬ್ರೆಟಿಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಝೆರೋಧ ಸಂಸ್ಥೆ ಸಂಸ್ಥಾಪಕ ನಿಖಿಲ್ ಕಾಮತ್ ಮೋಸದಾಟದಿಂದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.

ಚೆಸ್ ಪಂದ್ಯದಲ್ಲಿ ಸೆಲೆಬ್ರೆಟಿಗಳ ಮೋಡಿ; ಸುದೀಪ್ ಆಟಕ್ಕೆ ದಿಗ್ಗಜ ವಿಶ್ವನಾಥನ್ ಆನಂದ್ ಮೆಚ್ಚುಗೆ!.

ಸೆಲೆಬ್ರೆಟಿಗಳು ಏಕಕಾಕಲಕ್ಕೆ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ವಿರುದ್ಧ ಆಟವಾಡಿದ್ದರು. ಸುದೀಪ್, ಚಹಾಲ್ ಸೇರಿದಂತೆ ಎಲ್ಲಾ ಸೆಲೆಬ್ರೆಟಿಗಳನ್ನು ಸೋಲಿಸಿದ್ದ ಆನಂದ್ ನಿಖಿಲ್ ಕಾಮತ್ ವಿರುದ್ದ ಆಟ ಅಷ್ಟು ಸುಲಭವಾಗಿರಲಿಲ್ಲ. ಈ ಆಟದಲ್ಲಿ ನಿಖಿಲ್, ದಿಗ್ಗಜ ವಿಶಿಯನ್ನೇ ಸೋಲಿಸಿದ್ದರು. ಶೇ.99 ರಷ್ಟು ನಿಖರತೆ ಹೊಂದಿದ್ದ ಕಾರಣ ಪರಿಶೀಲಿಸಲಾಯಿತು. ಈ ವೇಳೆ ನಿಖಿಲ್ ಕಂಪ್ಯೂಟರ್ ಅನಾಲಿಸ್ಟ್ ನೆರವು ಪಡೆದಿರುವುದು ಬಹಿರಂಗವಾಗಿತ್ತು.

ನಿಖಿಲ್ ಮೋಸದಾಟ ಬಹಿರಂಗವಾಗುತ್ತದ್ದಂತೆ ಆಕ್ರೋಶ ಹೆಚ್ಚಾಗಿತ್ತು, ಟ್ವಿಟರ್ ಮೂಲಕ ನೆಟ್ಟಿಗರು ನಿಖಿಲ್ ವಿರುದ್ಧ ಕಮೆಂಟ್ ಮಾಡಿದ್ದರು. ಇತ್ತ ಆನಂದ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ನಿಖಿಲ್ ಕಾಮತ್ ತಮ್ಮ ಮೋಸದಾಟಕ್ಕೆ ಕ್ಷಮೆ ಕೇಳಿದ್ದಾರೆ. ಜೊತೆಗೆ ತಾವು ಕಂಪ್ಯೂಟರ್ ಅನಾಲಿಸ್ಟ್ ನೆರವು ಪಡೆದಿರುವುದನ್ನು ಒಪ್ಪಿಕೊಂಡಿದ್ದರು. 

ಮೋಸದಾಟವಾಡಿದ ನಿಖಿಲ್ ಕಾಮತ್ ಕ್ಷಮೆ ಕೇಳಿದರೂ, ವರ್ಚುವಲ್ ಚೆಸ್.ಕಾಂ ನಿಷೇಧ ಶಿಕ್ಷೆ ವಿಧಿಸಿದೆ. ನಿಖಿಲ್ ವರ್ಚುಲ್ ಚೆಸ್ ಆಡದಂತೆ ನಿರ್ಬಂಧಿಸಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಳಿಂಗ ಐಐಟಿಯಲ್ಲಿ ನಾಳೆಯಿಂದ ವಾಲಿಬಾಲ್ ವರ್ಲ್ಡ್‌ ಬೀಚ್ ಪ್ರೊ ಟೂರ್ನಿ!
ಇರಾನ್ ಸಂಘರ್ಷ: ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪಿವಿ ಸಿಂಧು, ಸಮೀಪದಲ್ಲೇ ಸ್ಫೋಟ ಬ್ಯಾಡ್ಮಿಂಟನ್ ತಾರೆ ಆತಂಕ!