
ಚೆನ್ನೈ(ಜ.20): 5ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಸೋಮವಾರದಿಂದ ಆರಂಭವಾಗಲಿದ್ದು, ಚೆನ್ನೈನಲ್ಲಿ ಮೊದಲ ಚರಣ ನಡೆಯಲಿದೆ.
ಹಾಲಿ ಚಾಂಪಿಯನ್ ಬೆಂಗಳೂರು ರಾಪ್ಟರ್ಸ್, ಅವಧ್ ವಾರಿಯರ್ಸ್, ಮುಂಬೈ ರಾಕೆಟ್ಸ್, ಹೈದ್ರಾಬಾದ್ ಹಂಟರ್ಸ್, ಚೆನ್ನೈ ಸೂಪರ್ಸ್ಟಾರ್ಸ್, ನಾರ್ಥ್ ಈಸ್ಟರ್ನ್ ವಾರಿಯರ್ಸ್ ಮತ್ತು ಪುಣೆ 7 ಏಸಸ್ ತಂಡಗಳು ಅದೃಷ್ಠ ಪರೀಕ್ಷೆಗೆ ಇಳಿಯುತ್ತಿವೆ. ಟೂರ್ನಿಯ ಒಟ್ಟು ಪ್ರಶಸ್ತಿ ಮೊತ್ತ 6 ಕೋಟಿ ಆಗಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ತಂಡ, ಹೈದ್ರಾಬಾದ್ ಎದುರು ಸೆಣಸಲಿದೆ.
ಪಿ ವಿ ಸಿಂಧು ತಮ್ಮ ಗುರು ಪುಲ್ಲೇಲಾ ಗೋಪಿಚಂದ್ ಪುತ್ರಿ ಗಾಯಿತ್ರಿ ಗೋಪಿಚಂದ್ ವಿರುದ್ಧ ಸೆಣಸಲಿದ್ದಾರೆ. ಉದ್ಘಾಟನಾ ಪಂದ್ಯ ಸೋಮವಾರ(ಜ.20) ಸಂಜೆ 7 ಗಂಟೆಗೆ ಆರಂಭವಾಗಲಿದೆ. ಗೋಪಿಚಂದ್ ಪುತ್ರಿ ಹಾಗೂ ಸಿಂಧು ನಡುವಿನ ಕಾದಾಟ ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.