
ಬಳ್ಳಾರಿ(ಸೆ.16): ರಾಷ್ಟ್ರೀಯ ಪುರುಷರ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಮೊದಲ ದಿನ ಏಷ್ಯನ್ ಚಾಂಪಿಯನ್ಶಿಪ್ ಪದಕ ವಿಜೇತ ಸುಮಿತ್ ಸಂಗ್ವಾನ್ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.
ವಿಜಯನಗರದಲ್ಲಿರುವ ಇನ್ಸ್ಪೈರ್ ಇನ್ಸ್ಟಿಟ್ಯೂಟ್ ಆಫ್ ಸ್ಪೋಟ್ಸ್ರ್ನಲ್ಲಿ ಆರಂಭವಾದ ಟೂರ್ನಿಯಲ್ಲಿ ಸುಮಿತ್, ಆಂಧ್ರಪ್ರದೇಶದ ಹರೀಶ್ ಪ್ರಸದುಲಾ ವಿರುದ್ಧದ 86 ಕೆ.ಜಿ. ವಿಭಾಗದ ಪಂದ್ಯಗಲ್ಲಿ ಗೆದ್ದರು.
ಇಂದಿನಿಂದ ಬಳ್ಳಾರಿಯಲ್ಲಿ ರಾಷ್ಟ್ರೀಯ ಬಾಕ್ಸಿಂಗ್ ಕೂಟ
2019ರ ಪ್ರೆಸಿಡೆಂಟ್ ಕಪ್ ಚಿನ್ನದ ಪದಕ ವಿಜೇತ ನೀರಜ್ ಸ್ವಾಮಿ(48 ಕೆ.ಜಿ.), ಹರ್ಯಾಣದ ಸಾಗರ್ ವಿರುದ್ಧ ಜಯ ಸಾಧಿಸಿದರು. ಪಂಜಾಬ್ನ ರಾಜ್ಪಿಂದರ್ ಸಿಂಗ್(54 ಕೆ.ಜಿ.) ಹಿಮಾಚಲ ಪ್ರದೇಶದ ರಾಹುಲ್ ನಿಲ್ತು ವಿರುದ್ಧ 5-0ಅಂತರದಲ್ಲಿ ಗೆದ್ದರು. 75 ಕೆ.ಜಿ. ವಿಭಾಗದಲ್ಲಿ ಮಹಾರಾಷ್ಟ್ರದ ನಿಖಿಲ್ ದುಬೆ ಹಾಗೂ ಛತ್ತೀಸ್ಗಢದ ದಿನೇಶ್ ಕುಮಾರ್ ಕ್ರಮವಾಗಿ ಗುಜರಾತ್ನ ಸೆಜದ್ ಲಿಲ್ಗರ್ ಹಾಗೂ ಪಶ್ಚಿಮಬಂಗಾಳದ ಅಭಿಶೇಕ್ ವಿರುದ್ಧ ಗೆಲುವು ಸಾಧಿಸಿದರು.
ಈ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಬಾಕ್ಸರ್ಗಳು ಅಕ್ಟೋಬರ್ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗೆ ನೇರ ಅರ್ಹತೆ ಪಡೆಯಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.