
ಬಳ್ಳಾರಿ(ಸೆ.18): ವಿಶ್ವ ಚಾಂಪಿಯನ್ಶಿಪ್ ಕಂಚು ವಿಜೇತ ಬಾಕ್ಸರ್ ಗೌರವ್ ಬಿಧುರಿ ರಾಷ್ಟ್ರೀಯ ಪುರುಷರ ಚಾಂಪಿಯನ್ಶಿಪನ್ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಶುಕ್ರವಾರ ನಡೆದ 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ರೈಲ್ವೇಸ್ನ ಗೌರವ್ ಹರಾರಯಣದ ಸಚಿನ್ ವಿರುದ್ಧ 1-4ರಿಂದ ಮುಗ್ಗರಿಸಿದರು. ದಕ್ಷಿಣ ಏಷ್ಯನ್ ಗೇಮ್ಸ್ ಚಾಂಪಿಯನ್ ಅಂಕಿತ್ ಖತಾನ (75 ಕೆ.ಜಿ.) ಹಿಮಾಚಲ ಪ್ರದೇಶದ ಧರಂ ಪಾಲ್ ವಿರುದ್ಧ ಗೆದ್ದು ಕ್ವಾರ್ಟರ್ಫೈನಲ್ ತಲುಪಿದರು.
ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್: ಎಸ್ಎಸ್ಸಿಬಿ ಪ್ರಾಬಲ್ಯ
ತೆಲಂಗಾಣದ ಸಾವಿಯೊ ಡೊಮಿನಿಕ್(54 ಕೆ.ಜಿ.), ಗೋವಾದ ಅಶೋಕ್ ಪಾಟೀಲ್(67 ಕೆ.ಜಿ.), ಚಂಡೀಗಢದ ಕುಲದೀಪ್ ಕುಮಾರ್(48 ಕೆ.ಜಿ.) ಹಾಗೂ ಸಚಿನ್, ಮಹಾರಾಷ್ಟ್ರದ ನಿಖಿಲ್ ದುಬೆ(75 ಕೆ.ಜಿ.) ಕೂಡಾ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.