
ಬೆಂಗಳೂರು(ಫೆ.07): 2020ರಲ್ಲಿ ತಮ್ಮ 30 ವರ್ಷಗಳ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಲಿರುವ ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಫೆ.10ರಿಂದ ಆರಂಭಗೊಳ್ಳಲಿರುವ ಬೆಂಗಳೂರು ಓಪನ್ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದು ಭಾರತದಲ್ಲಿ ಅವರು ಆಡಲಿರುವ ಕೊನೆ ಟೂರ್ನಿ ಎನ್ನುವುದು ವಿಶೇಷ. ಪೇಸ್ ಈ ವರ್ಷ ಕೆಲ ಆಯ್ದ ಪಂದ್ಯಾವಳಿಗಳಲ್ಲಿ ಆಡುತ್ತಿದ್ದು, ಸದ್ಯ ಪುಣೆ ಓಪನ್ನಲ್ಲಿ ಕಣಕ್ಕಿಳಿದಿದ್ದಾರೆ. ಬೆಂಗಳೂರು ಓಪನ್ನಲ್ಲಿ ಆಡುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ‘ತವರಿನಲ್ಲಿ ಭಾರತೀಯ ಅಭಿಮಾನಿಗಳ ಮುಂದೆ ಆಡುವುದು ನನಗೆ ಬಹಳ ಸಂತಸ ಹಾಗೂ ಸ್ಫೂರ್ತಿ ನೀಡಲಿದೆ. ಬೆಂಗಳೂರು ಅಭಿಮಾನಿಗಳು ಟೆನಿಸ್ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ. ಕ್ರೀಡಾಂಗಣ ಉತ್ತಮವಾಗಿದೆ. ಅಲ್ಲಿ ಆಡಲು ನನಗೆ ಖುಷಿಯಾಗುತ್ತದೆ’ ಎಂದಿದ್ದಾರೆ.
ಡೇವಿಸ್ ಕಪ್: ಕ್ರೊವೇಷಿಯಾ ಪಂದ್ಯಕ್ಕೆ ಭಾರತ ತಂಡ ಪ್ರಕಟ
ನವದೆಹಲಿ: ಮಾ.6 ಹಾಗೂ 7ರಂದು ಕ್ರೊವೇಷಿಯಾ ವಿರುದ್ಧ ಜಾಗ್ರೆಬ್ನಲ್ಲಿ ನಡೆಯಲಿರುವ ಡೇವಿಸ್ ಕಪ್ ವಿಶ್ವ ಗುಂಪು ಅರ್ಹತಾ ಸುತ್ತಿನ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. 6 ಸದಸ್ಯರ ತಂಡದಲ್ಲಿ ಲಿಯಾಂಡರ್ ಪೇಸ್ಗೆ ಸ್ಥಾನ ನೀಡಲಾಗಿದೆ. ರೋಹಿತ್ ರಾಜ್ಪಾಲ್ ತಂಡದ ಆಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ತಂಡ: ಪ್ರಜ್ನೇಶ್ ಗುಣೇಶ್ವರನ್, ಸುಮಿತ್ ನಗಾಲ್, ರಾಮ್ಕುಮಾರ್ ರಾಮನಾಥನ್, ರೋಹನ್ ಬೋಪಣ್ಣ, ದಿವಿಜ್ ಶರಣ್, ಲಿಯಾಂಡರ್ ಪೇಸ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.