
ಬೆಂಗಳೂರು(ಏ.10): ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿರುವ ಭಾರತದ ತಾರಾ ಈಜುಪಟುಗಳಾದ ಶ್ರೀಹರಿ ನಟರಾಜ್, ಸಾಜನ್ ಪ್ರಕಾಶ್ ಸೇರಿ 13 ಸದಸ್ಯರ ಭಾರತ ತಂಡ ಶುಕ್ರವಾರ ತಾಷ್ಕೆಂಟ್ಗೆ ಪ್ರಯಾಣಿಸಿತು.
ಏಪ್ರಿಲ್ 12ರಿಂದ ಇಲ್ಲಿ ನಡೆಯಲಿರುವ ಉಜ್ಬೇಕಿಸ್ತಾನ ಓಪನ್ ಈಜುಕೂಟದಲ್ಲಿ ಸ್ಪರ್ಧಿಸಲಿರುವ ಭಾರತೀಯ ಈಜುಗಾರರು, ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಶ್ರೀಹರಿ ಹಾಗೂ ಸಾಜನ್ ಈಗಾಗಲೇ ‘ಬಿ’ ದರ್ಜೆ ಅರ್ಹತಾ ಗುರಿಯನ್ನು ತಲುಪಿದ್ದು, ಒಲಿಂಪಿಕ್ಸ್ ಕೋಟಾ ಖಚಿತ ಪಡಿಸಿಕೊಳ್ಳಲು ‘ಎ’ ದರ್ಜೆಯ ಅರ್ಹತಾ ಗುರಿಯನ್ನು ತಲುಪಬೇಕಿದೆ.
ಸೇಯ್ಲಿಂಗ್: ಒಲಿಂಪಿಕ್ಸ್ಗೆ ರಾಜ್ಯದ ಗಣಪತಿಗೆ ಅರ್ಹತೆ
ಈ ಇಬ್ಬರ ಜೊತೆಗೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ (ಟಾಫ್ಸ್) ಪಟ್ಟಿಯಲ್ಲಿರುವ ಮಾನ ಪಟೇಲ್, ಶಿವಾನಿ ಕಟಾರಿಯಾ ಮೇಲೂ ನಿರೀಕ್ಷೆ ಇಡಲಾಗಿದೆ. ಅನುಭವಿ ಕೋಚ್ಗಳಾದ ನಿಹರ್ ಅಮಿನ್, ಪ್ರದೀಪ್ ಕುಮಾರ್ ಹಾಗೂ ಸಂದೀಪ್ ಸೆಜ್ವಾಲ್ ತಂಡದೊಂದಿಗೆ ಪ್ರಯಾಣಿಸಿದ್ದಾರೆ. ಕಳೆದ ವರ್ಷ ಮಾಚ್ರ್ ಬಳಿಕ ಭಾರತೀಯ ಈಜುಗಾರರು ಸ್ಪರ್ಧಿಸಲಿರುವ ಮೊದಲ ಅಂತಾರಾಷ್ಟ್ರೀಯ ಟೂರ್ನಿ ಇದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.