ಜಿಂಬಾಬ್ವೆಯಲ್ಲಿ ಕ್ಷಿಪ್ರ ಮಿಲಿಟರಿ ಆಡಳಿತ ? 400 ಭಾರತೀಯ ವಲಸಿಗರು ಸುರಕ್ಷಿತ

Published : Nov 15, 2017, 06:23 PM ISTUpdated : Apr 11, 2018, 12:48 PM IST
ಜಿಂಬಾಬ್ವೆಯಲ್ಲಿ ಕ್ಷಿಪ್ರ ಮಿಲಿಟರಿ ಆಡಳಿತ ? 400 ಭಾರತೀಯ ವಲಸಿಗರು ಸುರಕ್ಷಿತ

ಸಾರಾಂಶ

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿರುವ ಜಿಂಬಾಬ್ವೆಯ  ಭಾರತದ ರಾಯಭಾರಿ ಆರ್. ಮಸಾಕ್ಯೂ, ರಾಷ್ಟ್ರಧ್ಯಕ್ಷರು ಹಾಗೂ ಅವರ ಕುಟುಂಬ ಗೃಹಬಂಧನದಲ್ಲಿದ್ದರೂ ಯಾವುದೇ ತೊಂದರೆಯಿಲ್ಲ'ಎಂದಿದ್ದಾರೆ.

ಹರಾರೆ(ನ.15): ಅಧ್ಯಕ್ಷ ರಾಬರ್ಟ್ ಮುಗಾಂಬೆ ಅವರ ನಾಲ್ಕು ದಶಕಗಳ ಅಧಿಕಾರವನ್ನು ಕೊನೆಗಾಣಿಸಿರುವ ಅಲ್ಲಿನ ಸೇನೆ ಅಧ್ಯಕ್ಷರ ಕುಟುಂಬವನ್ನು ಗೃಹಬಂಧನದಲ್ಲಿರಿಸಿದೆ.

ದೇಶಾದ್ಯಂತ ಸೇನಾ ಆಡಳಿತ ಜಾರಿಯಾಗಿದೆ. ಆದರೆ ತಾವು ಯಾವುದೇ ರೀತಿಯ ಮಿಲಿಟರಿ ಆಡಳಿತ ನಡೆಸುತ್ತಿಲ್ಲ. ಅಪರಾಧಿಗಳನ್ನು ಹತ್ತಿಕುವ ಸಲುವಾಗಿ ಹಾಗೂ ಅಧ್ಯಕ್ಷರನ್ನು ರಕ್ಷಿಸುವ ಕಾರಣದಿಂದಾಗಿ ಗೃಹಬಂಧನದಲ್ಲಿಸಲಾಗಿದೆ'ಎಂದು ಮೇಜರ್ ಜನರಲ್ ಸಿಸಿಸಿಯೋ ಮೊಯೋ ರಾಷ್ಟ್ರೀಯ ವಾಹಿನಿಗಳಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ ಪ್ರತಿಯೊಬ್ಬ ನಾಗರಿಕರು ಸುರಕ್ಷಿತವಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿರುವ ಜಿಂಬಾಬ್ವೆಯ  ಭಾರತದ ರಾಯಭಾರಿ ಆರ್. ಮಸಾಕ್ಯೂ, ರಾಷ್ಟ್ರಧ್ಯಕ್ಷರು ಹಾಗೂ ಅವರ ಕುಟುಂಬ ಗೃಹಬಂಧನದಲ್ಲಿದ್ದರೂ ಯಾವುದೇ ತೊಂದರೆಯಿಲ್ಲ'ಎಂದಿದ್ದಾರೆ.

ಜಿಂಬಾಬ್ವೆಯಲ್ಲಿರುವ ಭಾರತೀಯರ ಬಗ್ಗೆ ಮಾಹಿತಿ ನೀಡಿರುವ ಅವರು ದೇಶದಲ್ಲಿ ನೆಲಸಿರುವ 400 ಮಂದಿ ವಲಸಿಗರು ಸುರಕ್ಷಿತವಾಗಿದ್ದಾರೆ. ಒಟ್ಟಾರೆ ದೇಶದಾದ್ಯಂತ ಒಟ್ಟು 9000 ಮಂದಿ ಭಾರತೀಯ ಮೂಲದವರು ನೆಲಸಿದ್ದು, ಎಲ್ಲರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ' ಎಂದು ತಿಳಿಸಿದ್ದಾರೆ.

ಹೊರಬಾರದಂತೆ ನಾಗರಿಕರಿಗೆ ಸಲಹೆ ನೀಡಿದ ಅಮೆರಿಕಾ,ಇಂಗ್ಲೆಂಡ್

ಅರಾಜಕತೆ ಉಂಟಾಗಿರುವ ಕಾರಣ ಅಮೆರಿಕಾ ಹಾಗೂ ಇಂಗ್ಲೆಂಡ್ ಸರ್ಕಾರ ಜಿಂಬಾಬ್ವೆಯಲ್ಲಿರುವ ತನ್ನ ನಾಗರಿಕರಿಗೆ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿದೆ. ಮಿಲಿಟರಿ ಅಧಿಕಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಸ್ಪಷ್ಟ ನಿರ್ದೇಶನಗಳು ರಾಷ್ಟ್ರಾದ್ಯಂತ ಗೋಚರಿಸುತ್ತಿವೆ. ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಮಿಲಿಟರಿ ವಾಹನಗಳು ಬೀಡುಬಿಟ್ಟಿವೆ. 93 ವರ್ಷದ ರಾಬರ್ಟ್ ಮುಗಾಂಬೆ 1980ರಿಂದ ಅಧಿಕಾರದಲ್ಲಿದ್ದು, ಹಲವು ವರ್ಷಗಳಿಂದ ಸೇನೆ ಹಾಗೂ ಮುಗಾಂಬೆ ಅವರಿಗೂ ರಾಜಕೀಯ ತಿಕ್ಕಾಟ ಶುರುವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುರ್ಚಿ ಸರ್ಕಸ್‌ ಮಧ್ಯೆ ಇಂದು ಸಿದ್ದು ದೆಹಲಿಗೆ - ನಾಳೆ ಸಿಡಬ್ಲುಸಿ ಸಭೆಯಲ್ಲಿ ಸಿಎಂ ಭಾಗಿ
ಸಲಹೆ ಕೊಟ್ಟರೆ ದುರಹಂಕಾರದ ಮಾತು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ