ರಾಜ್ಯ ರಾಜಕೀಯ ವಿಪ್ಲವಕ್ಕೆ ಯುವಕರ ಆಕ್ರೋಶ

Published : Jul 11, 2019, 04:34 PM ISTUpdated : Jul 11, 2019, 04:48 PM IST
ರಾಜ್ಯ ರಾಜಕೀಯ ವಿಪ್ಲವಕ್ಕೆ ಯುವಕರ ಆಕ್ರೋಶ

ಸಾರಾಂಶ

ರಾಜ್ಯದಲ್ಲಿ ಸೃಸ್ಟಿಯಾಗಿರುವ ಅರಾಜಕತೆಯನ್ನು ಬಾಗಲಕೋಟೆಯ ಯುವಕರು ಖಂಡಿಸಿದ್ದಾರೆ. ಈಗಾಗಲೇ ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ನೀಡುವುದು, ರೆಸಾರ್ಟ್‌ನಲ್ಲಿ ಉಳಿದುಕೊಳ್ಳೋದು, ಅವರನ್ನು ಒಲಿಸಿಕೊಳ್ಳೋದು ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ನಾಟಕೀಯ ಬೆಳವಣಿಗೆ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಗಲಕೋಟೆ (ಜು.11): ಅತೃಪ್ತ ಶಾಸಕರ ನಡೆಯನ್ನು ಖಂಡಿಸಿ ಮುಧೋಳ ಯುವ ಪಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ನಾಟಕವನ್ನು ಖಂಡಿಸಿರುವ ಯುವ ಪಡೆ, ಸೃಸ್ಟಿಯಾಗಿರೋ ಅರಾಜಕತೆ ಬಗ್ಗೆ ಕಿಡಿ ಕಾರಿದೆ. ಈಗಾಗಲೇ ರಾಷ್ಟ್ರಮಟ್ಟದಲ್ಲಿಯೂ ತಮಾಷೆಯ ವಸ್ತುವಾಗಿರುವ ರಾಜ್ಯ ರಾಜಕೀಯದ ಬಗ್ಗೆ ರಾಜ್ಯದ ಯುವಕರೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬಾಗಲಕೋಟೆಯ ಮುಧೋಳ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವಪಡೆ ಅಧ್ಯಕ್ಷ ಬಸವರಾಜ್, 'ರಾಜಕಾರಣಿಗಳಿಗೆ ಮತದಾರನ ಅಭಿವೃದ್ಧಿ ಬೇಕಿಲ್ಲ. ಶಾಸಕರಿಗೆ ತಮ್ಮ ಅಭಿವೃದ್ಧಿ ಮುಖ್ಯವಾಗಿದೆ. ಇಂತಹ ರಾಜಕಾರಣಿಗಳು ನಮ್ಮ ರಾಜ್ಯಕ್ಕೆ ಮಾರಕ. ಶಾಸಕ ಸ್ಥಾನದ ಪಾವಿತ್ರ್ಯತೆ ಹಾಳುಮಾಡುವ ಶಾಸಕರು ಬೇಕಿಲ್ಲ. ಇಂತಹ ಶಾಸಕರಿಗೆ ಕ್ಷೇತ್ರದ ಜನತೆ ಮರಳಾಗಬಾರದು' ಎಂದಿದ್ದಾರೆ.

ರಾಜೀನಾಮೆ ಕೊಟ್ಟ ಇಬ್ಬರು ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ಖತಂ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್