ರಾಹುಲ್ಗೆ ಮಂದಿರ-ಮಸೀದಿಯ ನಡುವಿನ ವ್ಯತ್ಯಾಸ ಗೊತ್ತಿಲ್ಲ: ಸಿಎಂ ಯೋಗಿ ಆದಿತ್ಯನಾಥ
ಲಖನೌ: ‘‘ಕಾಶಿ ವಿಶ್ವನಾಥ ದೇಗುಲಕ್ಕೆ ಬಂದಾಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಮಾಜ್ ಮಾಡುವ ಭಂಗಿಯಲ್ಲಿ ಕುಳಿತಿದ್ದರು. ಆಗ ದೇವಸ್ಥಾನದ ಅರ್ಚಕರು ‘ಇದು ಮಸೀದಿ ಅಲ್ಲ. ಮಂದಿರ. ಚಕ್ಕಳ-ಬಕ್ಕಳ ಹಾಕಿಕೊಂಡು ಕುಳಿತುಕೊಳ್ಳಿ’ ಎಂದು ತಿಳಿಹೇಳಿದರು. ಇದು ರಾಹುಲ್ಗೆ ಮಂದಿರ-ಮಸೀದಿಯ ನಡುವಿನ ವ್ಯತ್ಯಾಸ ಗೊತ್ತಿಲ್ಲ ಎಂಬುದರ ದ್ಯೋತಕ’’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವ್ಯಂಗ್ಯವಾಡಿದ್ದಾರೆ. ‘ಆದರೆ ಇದು ಸುಳ್ಳು ಆರೋಪ’ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗ ಮುಖ್ಯಸ್ಥೆ ರಮ್ಯಾಆಕ್ರೋಶ ವ್ಯಕ್ತಪಡಿಸಿದ್ದಾರೆ.