
ಮುಂಬೈ: ಫೋಟೋಗ್ರಾಫರ್ಗಳ ಕಾಟತಾಳಲಾರದೇ ನಟಿ ಐಶ್ವರ್ಯಾ ರೈ ಕಣ್ಣೀರಿಟ್ಟ ಘಟನೆ ಸೋಮವಾರ ನಡೆದಿದೆ.
ತಮ್ಮ ತಂದೆಯವರ ಜನ್ಮದಿನದ ನಿಮಿತ್ತ ಐಶ್ವರ್ಯಾ ರೈ, ಸೀಳು ತುಟಿಯ ಕೆಲ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲೆಂದು ತಾಯಿ ಬೃಂದಾ, ಮಗಳು ಆರಾಧ್ಯಾ ಜತೆ ಖಾಸಗಿ ಆಸ್ಪತ್ರೆಗೆ ಬಂದಿದ್ದರು.
ಈ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕೆಲ ಫೋಟೋಗ್ರಾಫರ್ಗಳು ಸತತವಾಗಿ ಐಶ್ವರ್ಯಾರ ಫೋಟೊಗಳನ್ನು ತೆಗೆಯಲು ಶುರುಮಾಡಿದರು.
ಇದರಿಂದ ಬೇಸರಗೊಂಡ ಐಶ್ವರ್ಯಾ, ‘ಇದೇನೂ ಪ್ರೀಮಿಯರ್ ಶೋ ಅಲ್ಲ. ಇದು ಖಾಸಗಿ ಕಾರ್ಯಕ್ರಮ’ ಎಂದು ಛಾಯಾಗ್ರಾಹಕರನ್ನು ದಬಾಯಿಸಿದರು.
ಕೊನೆಗೆ ಭಾವುಕರಾಗಿ ಕಣ್ಣೀರು ಸುರಿಸಲು ಶುರು ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.