ತೆರವು ಕಾರ್ಯಾಚರಣೆಯಿಂದ ಕುಟುಂಬಗಳು ಅತಂತ್ರ; ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

Published : Nov 22, 2017, 02:03 PM ISTUpdated : Apr 11, 2018, 01:08 PM IST
ತೆರವು ಕಾರ್ಯಾಚರಣೆಯಿಂದ ಕುಟುಂಬಗಳು ಅತಂತ್ರ; ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಸಾರಾಂಶ

ನಿನ್ನೆ ರಾತ್ರಿಯಿಂದ ಬೀದರ್​ನ KIADB ಪ್ಲಾಟ್​ನಲ್ಲಿದ್ದ 100ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಬೀದಿಯಲ್ಲೇ ಮಲಗಿವೆ. ತೆರವು ಕಾರ್ಯಾಚರಣೆಯಿಂದ ಆಶ್ರಯ ಕಳೆದುಕೊಂಡು ಕಣ್ಣೀರಿಡುತ್ತಿವೆ.

ಬೀದರ್ (ನ.22): ನಿನ್ನೆ ರಾತ್ರಿಯಿಂದ ಬೀದರ್​ನ KIADB ಪ್ಲಾಟ್​ನಲ್ಲಿದ್ದ 100ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಬೀದಿಯಲ್ಲೇ ಮಲಗಿವೆ. ತೆರವು ಕಾರ್ಯಾಚರಣೆಯಿಂದ ಆಶ್ರಯ ಕಳೆದುಕೊಂಡು ಕಣ್ಣೀರಿಡುತ್ತಿವೆ.

ಅಮಾನವೀಯ ಅಂದರೆ  ಬೀದಿಗೆ ಬಿದ್ದಿದ್ದ ಗರ್ಭಿಯೊಬ್ಬಳಿಗೆ ನಿನ್ನೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಮೈಕೊರೆಯುವ ಚಳಿಯಲ್ಲಿ ಮಧ್ಯರಾತ್ರಿ ಮಗುವಿಗೆ ಜನ್ಮನೀಡಿದ್ದು ಬಾಣಂತಿ ರಸ್ತೆಬದಿ ಕಾಲ ಕಳೆಯುತ್ತಿದ್ದಾಳೆ. ಪುಟ್ಟ ಪುಟ್ಟ ಮಕ್ಕಳು, ಬಾಣಂತಿಯರು, ವೃದ್ಧರು ಬೀದಿಯಲ್ಲಿ ನರಳಾಡುತ್ತಿದ್ದರೂ  ಯಾವೊಬ್ಬ ಜನಪ್ರತಿನಿಧಿಯೂ ಈವರೆಗೆ ಸ್ಥಳಕ್ಕೆ ಮಾತ್ರ ಬಂದಿಲ್ಲ.  ಕೂಲಿ ಮಾಡಿ ಬದುಕುತ್ತಿದ್ದ ಕುಟುಂಬಗಳು ಆಶ್ರಯ ಇಲ್ಲದೆ ಬೀದಿಯಲ್ಲೇ ಕಣ್ಣೀರಿಡುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಹಿಂದ, ಎಡಪಂಥೀಯರೇ ನಿಜವಾದ ದ್ವೇಷಭಾಷಣಕಾರರು: ಎನ್.ರವಿಕುಮಾರ್ ಲೇಖನ
ಚಿತ್ರದುರ್ಗ ಬಸ್‌ ದುರಂತ: ಮೃತ ಸಂಖ್ಯೆ 7ಕ್ಕೆ ಏರಿಕೆ, ಬಸ್‌ ಡ್ರೈವರ್‌ ರಫೀಕ್‌ ಸಾವು