
ನಾಗ್ಪುರ : ನಾಗ್ಪುರದಲ್ಲಿ 14 ವರ್ಷದ ಬಾಲಕನೋರ್ವ 50 ತೊಲ ಬಂಗಾರವನ್ನು ಕದ್ದು ಪರಾರಿಯಾದ ಒಂದು ತಿಂಗಳ ಬಳಿಕ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಂಬಂಧಿ ಮಹಿಳೆಯ ಬಂಗಾರವನ್ನು ಕದ್ದೊಯ್ದ ಬಾಲಕ ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಪಡಲು ಬಯಸಿದ್ದ ಎನ್ನಲಾಗಿದೆ.
ಬಾರ್ ಡಾನ್ಸರ್ ಗಳನ್ನು ನೋಡಿದ್ದ ಆತ ಅವರಂತೆ ಐಶಾರಾಮಿ ಜೀವನ ಶೈಲಿಯನ್ನು ನಡೆಸಬಹುದು ಎಂದು ಲಿಂಗ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಬಾಲಕ ಕಳೆದ ಆಗಸ್ಟ್ 7 ರಂದು ಮನೆಯಿಂದ ಪರಾರಿಯಾಗಿದ್ದ. ಸೆಪ್ಟೆಂಬರ್ 17 ರಂದು ಈ ಬಾಲಕನನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ.
ಇದೇ ವೇಳೆ ನಾಲ್ವರನ್ನು ಬಂಧಿಸಿ ಅವರಿಂದ 30 ತೊಲ ಬಂಗಾರ ದ್ವಿಚಕ್ರ ವಾಹನ ಹಾಗೂ ಮೂರು ಮೊಬೈಲ್ ಫೊನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಇವರನ್ನು ಸದ್ಯ ರಿಮಾಂಡ್ ಹೋಮ್ ನಲ್ಲಿ ಇರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.