
ಮೈಸೂರು (ಮಾ. 04): ಯದುವೀರ್ ಕೃಷ್ಣದತ್ತ ಒಡೆಯರ್ ಇಂದು ಕಪ್ಪಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕೆ ಆರ್ ನಗರ ತಾಲೂಕಿನ ಹೆಬ್ಬಾಳು ಸಮೀಪ ಇರುವ ಇತಿಹಾಸ ಪ್ರಸಿದ್ದ ಕಪ್ಪಡಿ ಗದ್ದಿಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಂಬಂಧಿಕರು ಹಾಗೂ ಪೀಠಾಧಿಪತಿ ವರ್ಚಸ್ ಸಿದ್ದಲಿಂಗರಾಜೇ ಅರಸ್ ಅವರನ್ನ ಭೇಟಿ ಮಾಡಿ ಮಾಡಿ ಯದುವೀರ್ ಆಶೀರ್ವಾದ ಪಡೆದರು. ನಂತರ ರಾಜಪ್ಪಾಜಿ ಹಾಗೂ ಚನ್ನಾಜಮ್ಮ ಗದ್ದುಗೆಗೆ ನಮಸ್ಕರಿಸಿ ಪ್ರದಕ್ಷಣೆ ಹಾಕಿದರು.
ಶಿವರಾತ್ರಿಯಿಂದ ಯುಗಾದಿ ಹಬ್ಬದ ವರೆಗೆ ಕಪ್ಪಡಿಜಾತ್ರೆ ನಡೆಯುತ್ತದೆ. ಇಂದು ಬೆಳಿಗ್ಗೆ 9:30 ರದ 11:30 ರ ವರೆಗೆ ಕಪ್ಪಡಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ವರ್ಚಸ್ ಸಿದ್ದಲಿಂಗರಾಜೇ ಸರಸ್ ಅವರು ಭಾಗಿಯಾಗಿದ್ದರು.
ಕಪ್ಪಡಿ ಪುರಾಣ ಕಾಲದಿಂದಲೂ ಸತ್ಯ, ಆಣೆ ಪ್ರಮಾಣಕ್ಕೆ ಹೆರುವಾಸಿಯಾದ ಕ್ಷೇತ್ರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.