
ನಾಗಪುರ[ಸೆ.10]: ಚಂದ್ರಯಾನ 2 ನೌಕೆಯ ಭಾಗವಾಗಿದ್ದ ಲ್ಯಾಂಡರ್, ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡ ವಿಷಯ ಮತ್ತು ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುವ ಎರಡು ವಿಷಯಗಳು ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.
ಈ ನಡುವೆಯೇ ಈ ಎರಡೂ ವಿಷಯಗಳನ್ನು ಜೊತೆಗೂಡಿಸಿ ಮಹಾರಾಷ್ಟ್ರದ ನಾಗಪುರದ ಪೊಲೀಸರು ಮಾಡಿರುವ ಟ್ವೀಟೊಂದು ಭಾರೀ ವೈರಲ್ ಆಗಿದೆ. ಲ್ಯಾಂಡರ್ ಸಂಪರ್ಕ (ಸಿಗ್ನಲ್) ಕಡಿದುಕೊಂಡಿರುವ ಬಗ್ಗೆ ಹಾಸ್ಯವಾಗಿ ಪ್ರತಿಕ್ರಿಯಿಸಿರುವ ನಾಗಪುರ ಪೊಲೀಸರು ‘ಡಿಯರ್ ಡಿಯರ್ ವಿಕ್ರಮ್, ದಯವಿಟ್ಟು ಪ್ರತಿಕ್ರಿಯಿಸು. ನೀನು ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ದಂಡ ಹಾಕಲ್ಲ, ಸಂಪರ್ಕಕ್ಕೆ ಸಿಗು’ ಎಂದು ಟ್ವೀಟ್ ಮಾಡಿದ್ದರೆ.
ಇಸ್ರೋ ಲ್ಯಾಂಡರ್ ಅನ್ನು ಪತ್ತೆ ಹಚ್ಚಿದ್ದು ಹೇಗೆ?: ರೋಚಕ ಮಾಹಿತಿ ಬಹಿರಂಗ
ಪೊಲೀಸರ ಈ ಸಮಯಪ್ರಜ್ಞೆಗೆ ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.