
ಬೆಂಗಳೂರು(ಫೆ.13): ನಗರದಲ್ಲಿ ಕೆಲವು ಕಡೆ ಬಾಂಬ್ ಇಟ್ಟ ಬೆದರಿಕೆ ಕರೆ ಬಂದಿದೆ. ಪ್ರಕಾಶ್ ನಗರದ ಲ್ಯಾಂಡ್'ಲೈನ್'ನಿಂದ ಸುವರ್ಣ ನ್ಯೂಸ್ ಮುಖ್ಯ ಕಚೇರಿಗೆ ಕರೆ ಮಾಡಿದ ಅನಾಮಿಕ ಮಹಿಳೆಯೊಬ್ಬರು 2 ಆಸ್ಪತ್ರೆ, 9 ಶಾಲೆ, 2 ಬಸ್ಸ್ಟ್ಯಾಂಡ್'ನಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಯಾರಿಟ್ಟಿದ್ದಾರೆ ಎಂಬ ಬಗ್ಗೆ ಆ ಮಹಿಳೆ ತಿಳಿಸಲಿಲ್ಲ. ಬೆದರಿಕೆ ಕರೆ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಲ್ಯಾಂಡ್ ಲೈನ್ ಸಂಖ್ಯೆ ಬೆನ್ನತ್ತಿದ್ದ ಬಸವೇಶ್ವರ ನಗರ ಪೊಲೀಸರು ಕರೆ ಬಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.