
ಬೆಂಗಳೂರು: ಮಾನವೀಯತೆ ಎಂಬ ಪದಕ್ಕೆ ಅರ್ಥವಿಲ್ಲದಂತಾಗಿರುವ ಈ ಕಾಲದಲ್ಲಿ, ಪೊಲೀಸರಂತೂ ದರ್ಪ ತೋರುವುದು ಆಗಾಗ ವರದಿಯಾಗುತ್ತಿರುತ್ತದೆ. ಇವೆಲ್ಲವಕ್ಕೂ ಅಪವಾದವೆಂಬಂತೆ ಮಹಿಳಾ ಪೇದೆಯೊಬ್ಬರು ಎಲ್ಲಿಯೋ ತೊಟ್ಟಿಯಲ್ಲಿ ಸಿಕ್ಕ ಮಗುವಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ಎಲೆಕ್ರ್ಟಾನಿಕ್ ಸಿಟಿ ಠಾಣಾ ವ್ಯಾಪ್ತಿಯ ದೊಡ್ಡತಗೂರಿನಲ್ಲಿ ಕಸದ ತೊಟ್ಟಿಯಲ್ಲಿ ಯಾರೋ ಮಗುವನ್ನು ಎಸೆದು ಹೋಗಿದ್ದರು. ಪುಟ್ಟ ಕಂದನ ಆರ್ತನಾದ ಕೇಳಿಸಿಕೊಂಡ ಸ್ಥಳೀಯರು ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದ್ದರು. ಸ್ಥಳಕ್ಕೆ ತೆರಳಿದ ಹೊಯ್ಸಳದಲ್ಲಿ ಪೇದೆ ಅರ್ಚನಾ ಕರ್ತವ್ಯದಲ್ಲಿದ್ದರು. ತಕ್ಷಣವೇ ಮಗುವಿಗೆ ಎದೆ ಹಾಲುಣಿಸಿದ ಅರ್ಚನಾ, ತಾಯ್ತನ ಮೌಲ್ಯ ಮೆರೆದರು. ಅರ್ಚನಾ ಗಂಡು ಮಗುವಿನ ತಾಯಿಯಾಗಿದ್ದು, ಇತ್ತೀಚೆಗಷ್ಟೆ ಹೆರಿಗೆ ರಜೆ ಮುಗಿಸಿ,ಕರ್ತವ್ಯಕ್ಕೆ ಮರಳಿದ್ದಾರೆ.
ನಂತರ ಶಿಶು ಮಂದಿರಕ್ಕೆ ಮಗುವನ್ನು ಹ್ಯಾಂಡ್ ಮಾಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.