ಹಾಲು ಉತ್ಪಾದಕರ ಚುನಾವಣೆ: JDSಗೆ ಬೆಂಬಲ ಸೂಚಿಸಿದ್ದ ಮಹಿಳೆ ಕಿಡ್ನಾಪ್

Published : Oct 09, 2018, 04:45 PM ISTUpdated : Oct 09, 2018, 04:46 PM IST
ಹಾಲು ಉತ್ಪಾದಕರ ಚುನಾವಣೆ: JDSಗೆ ಬೆಂಬಲ ಸೂಚಿಸಿದ್ದ ಮಹಿಳೆ ಕಿಡ್ನಾಪ್

ಸಾರಾಂಶ

ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದ ಮಹಿಳೆಯನ್ನು ಕಿಡ್ನಾಪ್ ಮಾಡಿದ್ದಾರೆ.

ತುಮಕೂರು, (ಅ.09): ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದ ಮಹಿಳೆಯನ್ನು ಪುಂಡರು ಅಪಹರಿಸಿದ್ದಾರೆ.

ಈ ಘಟನೆ ಇಂದು (ಮಂಗಳವಾರ) ತುಮಕೂರು ಜಿಲ್ಲೆ ಶಿರಾ ತಾಲೂಕಿನ ಯಲದಬಾಗಿಯಲ್ಲಿ ನಡೆದಿದೆ. ಇದೇ ತಿಂಗಳು 30 ನೇ ತಾರೀಕು ಯಲದಬಾಗಿ ಗ್ರಾಮದ ಹಾಲು ಉತ್ಪಾದಕ ಸಂಘಕ್ಕೆ ಚುನಾವಣೆ ಘೋಷಣೆಯಾಗಿತ್ತು.

ಮತ್ತೊಂದೆಡೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಅನ್ನಪೂರ್ಣ ಎನ್ನುವರು ಜೆಡಿಎಸ್ ಮುಖಂಡರಿಗೆ ಬೆಂಬಲ ನೀಡಿದ್ದರು. ಈ ವಿಚಾರವಾಗಿ ಗಲಾಟೆ ನಡೆದಿದೆ.

ಇದ್ರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಅನ್ನಪೂರ್ಣ ಬಳಿ ಸಂಘದ ಸದಸ್ಯರ ಮತ ಗುರುತಿನ ಪತ್ರಗಳಿದ್ದ, ಚುನಾವಣೆಯಲ್ಲಿ ಮತ ಚಲಾಹಿಸಲು ಗುರುತಿ ಪತ್ರ ನೀಡಬೇಕಿತ್ತು.

ಆದರೆ, ಮತ ಪತ್ರಗಳನ್ನು ನೀಡದಂತೆ ತಡೆಯಲು ಅನ್ನಪೂರ್ಣಮ್ಮಳನ್ನ ಹಾಡಹಗಲೇ ಟಾಟಾ ಸುಮೋ ವಾಹನದಲ್ಲಿ ಎಳೆದೊಯ್ದಿದ್ದಾರೆ.

ಹಾವಿನಾಳು ಹಾಗೂ ಯಲದಬಾಗಿ ಗ್ರಾಮದ ರಂಗನಾಥ್, ನವೀನ್, ಆನಂದ್ ಮತ್ತು ಗುರುಪ್ರಸಾದ್ ಎಂಬುವರು ಈ ಕೃತ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಇನ್ನಿಲ್ಲ; ಹೊಟ್ಟೆನೋವು ತಾಳಲಾರದೇ ಆತ್ಮ*ಹತ್ಯೆ!
ಹೊಸ ವರ್ಷ 2026ಕ್ಕೆ ಕೆಲವೇ ದಿನ, 2025ರಲ್ಲಿ ದೇಶಮಟ್ಟದಲ್ಲಿ ಸುದ್ದಿಯಾದ ಬೆಂಗಳೂರಿನ ಅಪರಾಧ ಲೋಕದ ಕರಾಳ ಅಧ್ಯಾಯಗಳಿವು!