ಎಲ್ಲರನ್ನೂ ಬೆಂಕಿಯಿಂದ ರಕ್ಷಿಸಿ ತಾನೇ ಬೆಂದು ಹೋದ ಸ್ವಾತಿ!

Published : Oct 09, 2018, 04:01 PM ISTUpdated : Oct 09, 2018, 09:16 PM IST
ಎಲ್ಲರನ್ನೂ ಬೆಂಕಿಯಿಂದ ರಕ್ಷಿಸಿ ತಾನೇ ಬೆಂದು ಹೋದ ಸ್ವಾತಿ!

ಸಾರಾಂಶ

ಗುರುಗ್ರಾಮ್ ಅಪಾರ್ಟಮೆಂಟ್ ನಲ್ಲಿ ಬೆಂಕಿ! ನೆರೆಹೊರೆಯವರ ಜೀವ ಉಳಿಸಿ ಕೊನೆಯುಸಿರೆಳೆದ ಸ್ವಾತಿ! ಕೊನೆ ಕ್ಷಣದವರೆಗೂ ಇತರರ ಸುರಕ್ಷತೆ ಕುರಿತು ಚಿಂತಿಸಿದ ಮಹಿಳೆ!10ನೇ ಮಹಡಿ ಗೇಟ್ ತೆರೆಯಲಾರದೇ ಉಸಿರುಗಟ್ಟಿ ಸ್ವಾತಿ ಸಾವು! ಸ್ವಾತಿ ನಿಸ್ವಾರ್ಥ ಸೇವೆ, ಧೈರ್ಯಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ

ಗುರುಗ್ರಾಮ್(ಅ.9): ವೃತ್ತಿಯಿಂದ ಆಕೆ ಫ್ಯಾಶನ್ ಡಿಸೈನರ್, ಗಂಡ ಮತ್ತು ಮಕ್ಕಳ ಜೊತೆಗಿನ ಚೆಂದದ ಸಂಸಾರ ಆಕೆಯದ್ದು. ಆದರೆ ಆಕೆ ನೆಲೆಸಿದ್ದ ಅಪಾರ್ಟಮೆಂಟ್ ಗೆ ಬೆಂಕಿ ಬಿದ್ದಿದ್ದೇ ಬಿದ್ದಿದ್ದು, ಆಕೆಯನ್ನು ಬಲಿ ಪಡೆದಿದ್ದಷ್ಟೇ ಅಲ್ಲ, ಆಕೆಯ ಸಂಸಾರದ ನಗುವನ್ನೂ ಕಸಿದುಕೊಂಡಿತು.

ಹೌದು, ರಾಷ್ಟ್ರ ರಾಜಧಾನಿ ನವದೆಹಲಿಯ ಪಕ್ಕದಲ್ಲೇ ಇರುವ ಗುರುಗ್ರಾಮ್ ದಲ್ಲಿ ಟುಲಿಪ್ ಆರೆಂಜ್ ಎಂಬ ಅಪಾರ್ಟಮೆಂಟ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಪಾರ್ಟಮೆಂಟ್ ನ 10ನೇ ಮಹಡಿಯಲ್ಲಿ ವಾಸವಿದ್ದ ಸ್ವಾತಿ ಗರ್ಗ್ ಮನಸ್ಸು ಮಾಡಿದ್ದರೆ ತಾವೊಬ್ಬರೇ ಅಪಾರ್ಟಮೆಂಟ್ ನಿಂದ ಸುರಕ್ಷಿತವಾಗಿ ಹೊರ ಬರಬಹುದಿತ್ತು.

ಆದರೆ ಅಪಾರ್ಟಮೆಂಟ್ ನ ಇತರರನ್ನೂ ಎಚ್ಚರಿಸುವ ಉದ್ದೇಶದಿಂದ ಸ್ವಾತಿ ಎಲ್ಲರ ಮನೆಗಳಿಗೂ ಹೋಗಿ ಬೆಂಕಿ ಹೊತ್ತುಕೊಂಡಿರುವ ವಿಷಯ ತಿಳಿಸಿದ್ದಾರೆ. ಸ್ವಾತಿ ಎಚ್ಚರಿಕೆಯಿಂದ ಎಲ್ಲರೂ ಅಪಾರ್ಟಮೆಂಟ್ ನಿಂದ ಸುರಕ್ಷಿತವಾಗಿ ಹೊರ ಬಂದಿದ್ದಾರೆ.

ಆದರೆ ಎಲ್ಲರ ಜೀವ ಉಳಿಸಿದ ಸ್ವಾರತಿ ಮಾತ್ರ ಅಪಾರ್ಟಮೆಂಟ್ ನಿಂದ ಹೊರಬಂದಿದ್ದು ಮಾತ್ರ ಹೆಣವಾಗಿ. ಹೌದು, ತನ್ನ ನೆರೆಹೊರೆಯವರ ಪ್ರಾಣ ಉಳಿಸಿದ ಸ್ವಾತಿ ಕೊನೆ ಕ್ಷಣದಲ್ಲಿ 10ನೇ ಮಹಡಿಯ ಗೇಟ್ ಬಂದ್ ತೆರೆಯದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಸ್ವಾತಿ ಗರ್ಗ್ ತಮ್ಮ ಮಗಳನ್ನು ಕೂಡ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಆದರೆ ಸ್ವಾತಿ ಅಪಾರ್ಟಮೆಂಟ್ ನಿಮದ ಹೊರಬರಲು ಪ್ರಯತ್ನಿಸುತ್ತಿದ್ದಾಗ ಕೊನೆ ಕ್ಷಣದಲ್ಲಿ 10ನೇ ಮಹಡಿಯ ಗೇಟ್ ಮುಚ್ಚಿಕೊಂಡಿದೆ. ಇದರಿಂದ ಸ್ವಾತಿ ಹೊರ ಬರಲಾರದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಸ್ವಾತಿ ಅವರ ನಿಸ್ವಾರ್ಥ ಮನೋಭಾವ ಮತ್ತು ಧೈರ್ಯದ ಫಲವಾಗಿ ಅಪಾರ್ಟಮೆಂಟ್ ನಿವಾಸಿಗಳ ಜೀವ ಉಳಿದಿದ್ದು, ಸ್ವಾತಿ ಗರ್ಗ್ ಮಾತ್ರ ಬದುಕುಳಿಯದೇ ಇರುವುದು ದುರಂತವೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!