ಅನಂತ್ ಇಲ್ಲ, ಗೌಡ್ರು ಮೊಯ್ಲಿ, ಖರ್ಗೆ ಹೋಗ್ಲಿಲ್ಲ: ಸಂಕಷ್ಟದಲ್ಲಿ ದೆಹಲಿ-ಬೆಂಗ್ಳೂರು ಕನೆಕ್ಷನ್!

Published : May 29, 2019, 01:58 PM IST
ಅನಂತ್ ಇಲ್ಲ, ಗೌಡ್ರು ಮೊಯ್ಲಿ, ಖರ್ಗೆ ಹೋಗ್ಲಿಲ್ಲ: ಸಂಕಷ್ಟದಲ್ಲಿ ದೆಹಲಿ-ಬೆಂಗ್ಳೂರು ಕನೆಕ್ಷನ್!

ಸಾರಾಂಶ

ದಿವಂಗತ ಅನಂತ್ ಕುಮಾರ್ ದೆಹಲಿಯಲ್ಲಿ ಭಾರೀ ವರ್ಚಸ್ಸಿದ್ದ ರಾಜಕಾರಣಿ | ಅವರ ನಿಧನದ ನಂತರ ಕರ್ನಾಟಕದ ಕೊಂಡಿಯೊಂದು ಕಳಚಿ ಬಿತ್ತು | ಖರ್ಗೆ, ದೇವೇಗೌಡ, ಮೊಯ್ಲಿ ಸೋಲಿನಿಂದ ಸಂಕಷ್ಟ ಎದುರಾಗಿದೆ. 

ನವದೆಹಲಿ (ಮೇ. 29): ದಿಲ್ಲಿಯಲ್ಲಿ ಬಿಜೆಪಿ ಮತ್ತು ಸರ್ಕಾರದ ಮೇಲೆ ಹಿಡಿತವಿರಿಸಿಕೊಂಡು ಲಾಬಿ ಮಾಡುವ ಪ್ರಭಾವ ಹೊಂದಿದ್ದ ಅನಂತಕುಮಾರ್‌ ತೀರಿಕೊಂಡಿದ್ದೇ ರಾಜ್ಯದ ಹಿತಾಸಕ್ತಿಗೆ ದೊಡ್ಡ ನಷ್ಟವಾಗಿತ್ತು.

ಮೋದಿ ಸಂಪುಟದಲ್ಲಿ ಮಂತ್ರಿಯಾಗೋರ್ಯಾರು?

ಈಗ ಚುನಾವಣೆಯಲ್ಲಿ ಖರ್ಗೆ, ದೇವೇಗೌಡ ಮತ್ತು ವೀರಪ್ಪ ಮೊಯ್ಲಿ ಸೋತಿರುವುದು ದಿಲ್ಲಿಯ ಕನೆಕ್ಷನ್ನನ್ನೇ ಕಟ್‌ ಮಾಡಲಿದೆ. ದಿಲ್ಲಿಯಲ್ಲಿ ಮಂತ್ರಿಗಳ ಎದುರು ಸ್ವಲ್ಪ ಪರಿಚಿತರಾಗಿರುವ ಸದಾನಂದಗೌಡ, ಪ್ರಹ್ಲಾದ್‌ ಜೋಷಿ, ಸುರೇಶ್‌ ಅಂಗಡಿ, ಉದಾಸಿ ಮೇಲೆ ರಾಜ್ಯದ ದೃಷ್ಟಿಯಿಂದ ದೊಡ್ಡ ಜವಾಬ್ದಾರಿಯಂತೂ ಇದ್ದೇ ಇದೆ.

ಸೋತಿರುವ ಖರ್ಗೆ, ವೀರಪ್ಪ ಮೊಯ್ಲಿ, ಕೆ ಎಚ್‌ ಮುನಿಯಪ್ಪ ಮುಂದಿನ 3 ತಿಂಗಳಲ್ಲಿ ಮನೆ ಖಾಲಿ ಮಾಡಬೇಕು. ಆದರೆ ಮಾಜಿ ಪ್ರಧಾನಿ ಆಗಿರುವುದರಿಂದ ದೇವೇಗೌಡರೇನೂ ಮನೆ ಖಾಲಿ ಮಾಡಬೇಕಿಲ್ಲ. ಆದರೆ ಇನ್ನುಮೇಲೆ ಗೌಡರ ದಿಲ್ಲಿ ಯಾತ್ರೆಗಳು ಕಡಿಮೆ ಆಗಬಹುದು.

ಅಂದ ಹಾಗೆ 20 ವರ್ಷದಿಂದ ದೇವೇಗೌಡರು ಕೊಟ್ಟಿದ್ದ ಒನ್‌ ರೂಮ್ ಅತಿಥಿ ಕೋಣೆಯಲ್ಲಿ ಇರುತ್ತಿದ್ದ ಡ್ಯಾನಿಶ್‌ ಅಲಿ ಆ ಕಡೆ ಗೌಡರು ಸೋತಾಗಲೇ ಈ ಕಡೆ ಸಂಸದರಾಗಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ