ಭಾರತದ ತಿಜೋರಿ ಈಗ ಮಹಿಳೆಯ ಕೈಯಲ್ಲಿ: ನಿರ್ಮಲಾಗೆ ಬಲಿಷ್ಠ ಹಣಕಾಸು ಇಲಾಖೆ

Published : May 31, 2019, 03:13 PM ISTUpdated : May 31, 2019, 03:33 PM IST
ಭಾರತದ ತಿಜೋರಿ ಈಗ ಮಹಿಳೆಯ ಕೈಯಲ್ಲಿ: ನಿರ್ಮಲಾಗೆ ಬಲಿಷ್ಠ ಹಣಕಾಸು ಇಲಾಖೆ

ಸಾರಾಂಶ

ಮಹಿಳೆ ಕೈಯಲ್ಲಿ ಭಾರತದ ತಿಜೋರಿ..!| ದೇಶದ ರಕ್ಷಣೆ ಆಯ್ತು, ಈಗ ಹಣಕಾಸು..!| ಕರ್ನಾಟಕದ ನಿರ್ಮಲಾ ಸೀತಾರಾಮನ್‌ಗೆ ಒಲಿದ ಹಣಕಾಸು ಇಲಾಖೆ

ನವದೆಹಲಿ[ಮೇ.31]: ನಿರ್ಮಲಾ ಸೀತಾರಾಮನ್ ಗೆ ಎರಡನೇ ಅವಧಿಯಲ್ಲೂ ಪವರ್ ಫುಲ್ ಖಾತೆ ಸಿಕ್ಕಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಈ ಹಿಂದೆ ನಿಭಾಯಿಸುತ್ತಿದ್ದ ಹಣಕಾಸು ಇಲಾಖೆ ಜವಾಬ್ದಾರಿ ಈ ಬಾರಿ ನಿರ್ಮಲಾ ಸೀತಾರಾಮನ್ ಹೆಗಲೇರಿದೆ. ಈ ಮೂಲಕ ಸ್ವತಂತ್ರ ಭಾರತದ ಎರಡನೇ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ 1970ರಲ್ಲಿ ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಈ ಖಾತೆ ನಿರ್ವಹಿಸಿದ್ದರು.

ಹಣಕಾಸು ಖಾತೆಗೆ ನಿರ್ಮಲಾ ಹೆಸರು ಶಿಫಾರಸು ಮಾಡಿದ್ದೇ ಅರುಣ್ ಜೇಟ್ಲಿ

ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಕೆಲ ದಿನಗಳ ಹಿಂದಷ್ಟೇ ತನಗೆ ಯಾವುದೇ ಖಾತೆ ಬೇಡ ಎಂದು ಮೋದಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅರುಣ್ ಜೇಟ್ಲಿ ಬಳಿ ಖಾತೆ ನಿಭಾಯಿಸಲು ಯಾರು ಸಮರ್ಥರು ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜೇಟ್ಲಿ ಅರ್ಥಶಾಸ್ತ್ರ ಓದಿಕೊಂಡಿರುವ ನಿರ್ಮಲಾ ಹಣಕಾಸು ವ್ಯವಹಾರ ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದರೆನ್ನಲಾಗಿದೆ.

ಮೋದಿ ಸಂಪುಟದ ಖಾತೆ ಹಂಚಿಕೆ: ಕರ್ನಾಟಕದ ಸಚಿವರಿಗೆ ಯಾವ-ಯಾವ ಖಾತೆ?

ಈ ಹಿಂದೆ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆಯಾಗಿ ನೇಮಕಗೊಂಡಾಗ, ಆ ಖಾತೆ ನಿಭಾಯಿಸಲು ಅವರು ಅಸಮರ್ಥರು ಎಂದು ಹಲವರು ಆರೋಪಿಸಿದ್ದರು. ಆದರೆ ಈ ಎಲ್ಲಾ ಆರೋಪಗಳನ್ನು ಹುಸಿಯಾಗಿದ್ದ ನಿರ್ಮಲಾ ತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದೀಗ ಎರಡನೇ ಅವಧಿಯಲ್ಲಿ ಮತ್ತೊಂದು ಮಹತ್ತರ ಜವಾಬ್ದಾರಿ ಅವರ ಹೆಗಲೇರಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!