ತಲೆ ಕತ್ತರಿಸಿ ಹಾಕ್ತೀನಿ: ಬಿಜೆಪಿ ನಾಯಕಗೆ ಸಿಎಂ ಖಟ್ಟರ್‌ ಎಚ್ಚರಿಕೆ!

Published : Sep 12, 2019, 10:43 AM IST
ತಲೆ ಕತ್ತರಿಸಿ ಹಾಕ್ತೀನಿ: ಬಿಜೆಪಿ ನಾಯಕಗೆ ಸಿಎಂ ಖಟ್ಟರ್‌ ಎಚ್ಚರಿಕೆ!

ಸಾರಾಂಶ

ತಲೆ ಕತ್ತರಿಸಿ ಹಾಕ್ತೀನಿ: ಬಿಜೆಪಿ ನಾಯಕಗೆ ಹರ್ಯಾಣ ಸಿಎಂ ಖಟ್ಟರ್‌ ಎಚ್ಚರಿಕೆ| ಅಹಂಕಾರ ಆರೋಗ್ಯಕ್ಕೆ ಒಳ್ಳೆದಲ್ಲ ಎಂದ ಕಾಂಗ್ರೆಸ್

ಚಂಡೀಗಢ[ಸೆ.12]: ಹರ್ಯಾಣ ಸಿಎಂ ಮನೋಹರ್‌ಲಾಲ್‌ ಖಟ್ಟರ್‌ ಬಿಜೆಪಿ ನಾಯಕನೊಬ್ಬನಿಗೆ ತಲೆ ಕತ್ತರಿಸಿ ಹಾಕ್ತೀನಿ ಎಂದು ಎಚ್ಚರಿಕೆ ನೀಡಿದ ಘಟನೆ ಬುಧವಾರ ಇಲ್ಲಿ ನಡೆದಿದೆ.

ಚುನಾವಣಾ ಪ್ರಚಾರದ ರೋಡ್‌ ಶೋ ಒಂದರಲ್ಲಿ ಖಡ್ಗ ಹಿಡಿದು ಭಾಷಣ ಮಾಡುತ್ತಿದ್ದ ಖಟ್ಟರ್‌ ಈ ಖಡ್ಗದಿಂದ ವಿರೋಧಿಗಳನ್ನು ಹೇಗೆ ನಿರ್ನಾಮ ಮಾಡಬಹುದು ಎಂದು ಹೇಳುತ್ತಿದ್ದರು. ಈ ವೇಳೆ ಪಕ್ಕದಲ್ಲಿದ್ದ ಅವರ ಪಕ್ಷದ ನಾಯಕನೊಬ್ಬ ಖಟ್ಟರ್‌ಗೆ ಕಿರೀಟ ತೊಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸಿಎಂ ಏನು ಮಾಡುತ್ತಿದ್ದೀಯಾ? ನಿನ್ನ ತಲೆ ಕತ್ತರಿಸಿ ಹಾಕುತ್ತೇನೆ ಎಂದು ಅಬ್ಬರಿಸಿದ್ದಾರೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ 'ಹುಷಾರಾಗಿರಿ, ಅಹಂಕಾರ ಆರೋಗ್ಯಕ್ಕೆ ಮಾರಕ' ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
ಧರ್ಮೇಂದ್ರ ಸಾವಿನ ಬೆನ್ನಲ್ಲಿಯೇ ಹೇಮಾಮಾಲಿನಿ ಹಾಗೂ ಆಕೆಯ ಪುತ್ರಿಯರಿಗೆ ಭಾರೀ ಅನ್ಯಾಯ?