ಚುನಾವಣಾ ಆಯೋಗದ ಮುಂದೆ 'ಸೈಕಲ್' ಹೊಡೆಯುತ್ತಿರುವ ಅಪ್ಪ-ಮಗ

Published : Jan 09, 2017, 10:22 AM ISTUpdated : Apr 11, 2018, 12:55 PM IST
ಚುನಾವಣಾ ಆಯೋಗದ ಮುಂದೆ 'ಸೈಕಲ್' ಹೊಡೆಯುತ್ತಿರುವ  ಅಪ್ಪ-ಮಗ

ಸಾರಾಂಶ

ಚುನಾವಣೆ ಹತ್ತಿರ ಬರುತ್ತಿದ್ದಂತೆ ಉತ್ತರ ಪ್ರದೇಶ ಚುನಾವಣಾ ಕಣ ರಂಗೇರುತ್ತಿದೆ. ಅಪ್ಪ ಮಗನ ನಡುವಿನ ರಾಜಕೀಯ ಕಾದಾಟ ಮುಗಿಯುತ್ತಿಲ್ಲ. ಸೈಕಲ್ ಗಾಗಿ ನಡೆಸುತ್ತಿರುವ ಕಿತ್ತಾಟ ಮುಂದುವರೆದಿದೆ.

 ಲಕ್ನೋ (ಜ.09): ಚುನಾವಣೆ ಹತ್ತಿರ ಬರುತ್ತಿದ್ದಂತೆ ಉತ್ತರ ಪ್ರದೇಶ ಚುನಾವಣಾ ಕಣ ರಂಗೇರುತ್ತಿದೆ. ಅಪ್ಪ ಮಗನ ನಡುವಿನ ರಾಜಕೀಯ ಕಾದಾಟ ಮುಗಿಯುತ್ತಿಲ್ಲ. ಸೈಕಲ್ ಗಾಗಿ ನಡೆಸುತ್ತಿರುವ ಕಿತ್ತಾಟ ಮುಂದುವರೆದಿದೆ.

ಮುಲಯಾಂ ಸಿಂಗ್ ಹಾಗೂ ಶಿವಪಾಲ್ ಯಾದವ್ ನೇತೃತ್ವದ ತಂಡ ಇಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿ ‘ಸೈಕಲ್’ ನಮಗೆ ಬೇಕು ಎಂದು ಕೇಳಿಕೊಂಡಿದ್ದಾರೆ. ಅದೇ ರೀ ಅಖಿಲೇಶ್ ಯಾದವ್ 2.30 ಕ್ಕೆ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದಾರೆ.

ಅಖಿಲೇಶ್ ಯಾದವ್ ಪಕ್ಷದ ಚಿಹ್ನೆ ಸೈಕಲ್ ಹಾಗೂ ಪಕ್ಷದ ಮುಖ್ಯಸ್ಥ ಸ್ಥಾನದ ಬಗ್ಗೆ ತಂದೆ ಮುಲಯಾಂ ಸಿಂಗ್ ಗೆ ಸವಾಲೆಸೆದಿದ್ದರು. 229 ಶಾಸಕರಲ್ಲಿ 200 ಶಾಸಕರ ಬೆಂಬಲವನ್ನು ಚುನಾವಣಾ ಆಯೋಗದ ಮುಂದಿಟ್ಟಿದ್ದಾರೆ.

ನನ್ನ ಮತ್ತು ಮಗನ ನಡುವೆ ಭಿನ್ನಾಭಿಪ್ರಾಯವಿಲ್ಲ. ಪಕ್ಷದಲ್ಲಿ ಕೆಲವು ಸಮಸ್ಯೆಗಳಿವೆ. ಇವೆಲ್ಲದರ ಹಿಂದೆ ಒಬ್ಬರ ಕೈವಾಡವಿದೆ. ಶೀಘ್ರದಲ್ಲಿಯೇ ವಿಚಾರ ಇತ್ಯರ್ಥಗೊಳ್ಳಲಿದೆ ಎಂದು ಮುಲಾಯಂ ಸಿಂಗ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ
ಫೇಸ್‌ಬುಕ್ ಚಿಟ್ಟೆಯ ಮುಖ ನೋಡಿ ಹನಿಹೀರಲು ಬಂದವನೇ ಟ್ರ್ಯಾಪ್ , ಯುವಕನ ಮೇಲೆ ಹಲ್ಲೆ, ಹಣಕ್ಕೆ ಬೇಡಿಕೆ ಇಟ್ಟವರು ಎಸ್ಕೇಪ್!