ಮೂರು ದೇಶಗಳ ಪೌರತ್ವ ಹೊಂದಿದ್ದ ಭಾರತದ ಮೊದಲ ಮತದಾರ ಸಾವು!

Published : Jan 09, 2017, 07:41 AM ISTUpdated : Apr 11, 2018, 01:07 PM IST
ಮೂರು ದೇಶಗಳ ಪೌರತ್ವ ಹೊಂದಿದ್ದ ಭಾರತದ ಮೊದಲ ಮತದಾರ ಸಾವು!

ಸಾರಾಂಶ

1913 ರಲ್ಲಿ ಜನಿಸಿ, ಮೂರು ದೇಶಗಳ ಪೌರತ್ವ ಹೊಂದಿದ್ದ ಭಾರತದ ಹಿರಿಯ ಹಾಗೂ ಮೊದಲ ಮತದಾರ ಎಂಬ ಖ್ಯಾತಿ ಪಡೆದಿದ್ದ ಅಸರ್ ಅಲಿ ಭಾನುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅಸರ್ ಅಲಿ ಭಾರತದೊಳಗಿದ್ದ ಬಾಂಗ್ಲಾದೇಶದ ಭಾಗದಲ್ಲಿ ನೆಲೆಸಿದ್ದ 9776 ನಿವಾಸಿಗಳಲ್ಲಿ ಅಸರ್ ಅಲಿ ಕೂಡಾ ಒಬ್ಬರಾಗಿದ್ದರು. ಐತಿಹಾಸಿಕ ದ್ವಿಪಕ್ಷೀಯ ಭೂ ಒಪ್ಪಂದದ ಬಳಿಕ, ಕಳೆದ ವರ್ಷವಷ್ಟೇ ಇವರು ಭಾರತದ ಪೌರತ್ವವನ್ನು ಪಡೆದಿದ್ದರು. ಅಲ್ಲದೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೂಚ್ ಬೆಹರ್'ನಲ್ಲಿ ಮೊದಲ ಮತದಾನ ಮಾಡಿದ್ದರು.   

ನವದೆಹಲಿ(ಜ.09): 1913 ರಲ್ಲಿ ಜನಿಸಿ, ಮೂರು ದೇಶಗಳ ಪೌರತ್ವ ಹೊಂದಿದ್ದ ಭಾರತದ ಹಿರಿಯ ಹಾಗೂ ಮೊದಲ ಮತದಾರ ಎಂಬ ಖ್ಯಾತಿ ಪಡೆದಿದ್ದ ಅಸರ್ ಅಲಿ ಭಾನುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

ಅಸರ್ ಅಲಿ ಭಾರತದೊಳಗಿದ್ದ ಬಾಂಗ್ಲಾದೇಶದ ಭಾಗದಲ್ಲಿ ನೆಲೆಸಿದ್ದ 9776 ನಿವಾಸಿಗಳಲ್ಲಿ ಅಸರ್ ಅಲಿ ಕೂಡಾ ಒಬ್ಬರಾಗಿದ್ದರು. ಐತಿಹಾಸಿಕ ದ್ವಿಪಕ್ಷೀಯ ಭೂ ಒಪ್ಪಂದದ ಬಳಿಕ, ಕಳೆದ ವರ್ಷವಷ್ಟೇ ಇವರು ಭಾರತದ ಪೌರತ್ವವನ್ನು ಪಡೆದಿದ್ದರು. ಅಲ್ಲದೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೂಚ್ ಬೆಹರ್'ನಲ್ಲಿ ಮೊದಲ ಮತದಾನ ಮಾಡಿದ್ದರು.   

ಅಸರ್ ಅಲಿ ತನ್ನ ಜೀವನವನ್ನು ಪೂರ್ವ ಪಾಕಿಸ್ತಾನದ ಮಧ್ಯ ಮಾಶಲ್'ದಂಗ ಎಂಬ ಪ್ರದೇಶದಲ್ಲಿ ಕಳೆದಿದ್ದರು. ಆದರೆ ಗಡಿ ಒಪ್ಪಂದದ ಬಳಿಕ ಇವರು ವಾಸವಿದ್ದ ಪ್ರದೇಶ ಬಾಂಗ್ಲಾದೇಶಕ್ಕೆ ಸೇರಿಕೊಂಡಿತ್ತು. ಬಳಿಕ 2015ರ ಆಗಸ್ಟ್ 1 ರಂದು ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಒಪ್ಪಂದದಲ್ಲಿ, ತಮ್ಮ ಕೆಲವು ಗಡಿ ಪ್ರದೇಶಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅಲಿ ಅಸರ್ ಇದ್ದ ಆ ಪ್ರದೇಶವೂ ಭಾರತಕ್ಕೆ ಸೇರಿಕೊಂಡಿದ್ದು, ಅಸರ್ ಸೇರಿದಂತೆ 14,864 ಮಂದಿಗೆ ಭಾರತದ ಪೌರತ್ವ ದೊರಕಿತ್ತು.

ಇವರು ನೆಲೆಸಿದ್ದ ಈ ಪ್ರದೇಶ ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಭಾರತಕ್ಕೆ ಸೇರಿದ ಬಳಿಕ ಕಳೆದ ಬಾರಿ ಇಲ್ಲಿ ಮೊದಲ ಚುನಾವಣೆ ನಡೆದಿತ್ತು. ಈ ಕೂಚ್ ಬಿಹಾರ್'ಗೆ ನಡೆದ ಈ ಮೊದಲ ಚುನಾವಣೆಯಲ್ಲಿ ಮತದಾನ ಮಾಡಿದವರಲ್ಲಿ ಅಸರ್ ಅಲಿ ಮೊದಲಿಗರಾಗಿದ್ದರು. ಆದರೆ ನಿನ್ನೆ ಮುಂಜಾನೆ ಸುಮಾರು 5 ಗಂಟೆಗೆ ಇವರು ಅಸು ನೀಗಿದ್ದಾರೆ. 'ಭಾರತದ ಪೌರತ್ವ ಪಡೆಯುವುದು ಇವರ ಕನಸಾಗಿತ್ತು ಹಾಗೂ ಪೌರತ್ವ ಪಡೆದ ಬಳಿಕ ಇವರು ಬಹಳ ಖುಷಿ ಮತ್ತು ನೆಮ್ಮದಿಯಿಂದಿದ್ದರು' ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅದೇನಿದ್ದರೂ ಮೂರು ದೇಶಗಳ ಪೌರತ್ವ ಪಡೆದಿದ್ದ ಅಪರೂಪದ ವ್ಯಕ್ತಿ ಈಗ ಇಹಲೋಕ ತ್ಯಜಿಸಿರುವುದು ನಿಜಕ್ಕೂ ವಿಷಾದನೀಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!