30 ಮಸೂದೆ ಅಂಗೀಕಾರ: ಲೋಕಸಭೆ ಹೊಸ ದಾಖಲೆ, 67 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು!

Published : Aug 04, 2019, 09:04 AM IST
30 ಮಸೂದೆ ಅಂಗೀಕಾರ: ಲೋಕಸಭೆ ಹೊಸ ದಾಖಲೆ, 67 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು!

ಸಾರಾಂಶ

ಮಸೂದೆ ಅಂಗೀಕಾರ: ಲೋಕಸಭೆ 67 ವರ್ಷಗಳ ಹೊಸ ದಾಖಲೆ| 30 ವಿಧೇಯಕಗಳಿಗೆ ಅಂಗೀಕಾರ ಪಡೆದ ಲೋಕಸಭೆ

ನವದೆಹಲಿ[ಆ.04]: ಪ್ರಸ್ತುತ ಲೋಕಸಭೆ ಅಧಿವೇಶನ ಮುಕ್ತಾಯಕ್ಕೆ ಇನ್ನೂ 3 ದಿನ ಮಾತ್ರ ಬಾಕಿಯಿದೆ. ಆದರೆ ಈಗಾಗಲೇ ಮಂಡನೆಯಾದ 36 ಮಸೂದೆಗಳಲ್ಲಿ 30 ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವ ಮೂಲಕ ಲೋಕಸಭೆ 67 ವರ್ಷಗಳಲ್ಲೇ ಹೊಸ ದಾಖಲೆ ಸ್ಥಾಪಿಸಿದೆ. 1952ರಲ್ಲಿ ಲೋಕಸಭೆಯಲ್ಲಿ 27 ಮಸೂದೆ ಮಂಡಿಸಿ ಅಂಗೀಕಾರ ಪಡೆದುಕೊಂಡಿದ್ದ ದಾಖಲೆಯನ್ನು ಇದೀಗ ಮುರಿಯಲಾಗಿದೆ.

ಈ ಬಾರಿಯ ಲೋಕ ಕಲಾಪ ಉತ್ಪಾದಕತೆ 20 ವರ್ಷಗಳ ಗರಿಷ್ಠ

ಲೋಕಸಭೆಯಲ್ಲಿ ಈಗಾಗಲೇ 30 ಮಸೂದೆ ಮತ್ತು ರಾಜ್ಯಸಭೆಯಲ್ಲಿ 25 ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ಅಧಿವೇಶನ ಅಂತ್ಯಕ್ಕೆ ಮೂರು ದಿನ ಮಾತ್ರ ಉಳಿದಿದ್ದು, ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ) ವಿಧೇಯಕ, ಅಣೆಕಟ್ಟುಗಳ ಸುರಕ್ಷತೆ ವಿಧೇಯಕ, ಚಿಟ್‌ಫಂಡ್‌ ತಿದ್ದುಪಡಿ ವಿಧೇಯಕ, ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ವಿಧೇಯಕಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಈ ವಿಧೇಯಕಗಳ ಮೇಲೆ ಚರ್ಚೆ ಕೂಡ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಮಸೂದೆಗಳಿಗೆ ಸಂಸತ್ತಿನ ಅಂಗೀಕಾರ ಪಡೆಯುವ ವಿಶ್ವಾಸದಲ್ಲಿದೆ. ಆಡಳಿತಾರೂಢ ಎನ್‌ಡಿಎಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿದ್ದರೂ ಯುಎಪಿಎ, ತ್ರಿವಳಿ ತಲಾಖ್‌ ಮಸೂದೆ ಮತ್ತಿತರ ವಿಧೇಯಕಗಳನ್ನು ತ್ವರಿತಗತಿಯಲ್ಲಿ ಮಂಡಿಸಿ ಅಂಗೀಕಾರವೂ ಪಡೆದುಕೊಂಡು ಯಶಸ್ವಿಯಾಗಿದೆ.

18 ವರ್ಷಗಳಲ್ಲೇ ಮೊದಲು, ಮಧ್ಯರಾತ್ರಿವರೆಗೂ ನಡೆಯಿತು ಲೋಕಸಭಾ ಕಲಾಪ!

ಅಧಿವೇಶನ ಅವಧಿ ಮುಕ್ತಾಯದೊಳಗೆ ಎಲ್ಲ ಮಸೂದೆಗಳ ಅಂಗೀಕಾರಕ್ಕೆ ಪ್ರಯತ್ನಿಸಲಾಗುವುದು. ಈಗಾಗಲೇ 36 ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. 30 ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳಲಾಗಿದೆ. ಮಂಡನೆಯಾದ ಉಳಿದ ವಿಧೇಯಕಗಳೂ ಅಂಗೀಕಾರವಾದಲ್ಲಿ ಈ ಬಾರಿಯ ಅಧಿವೇಶನ ಅತಿಹೆಚ್ಚು ಮಸೂದೆ ಅಂಗೀಕರಿಸಿದ ಮತ್ತು ದೀರ್ಘ ಸಮಯ ನಡೆದ ಅಧಿವೇಶನವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?