ಬಿಲ್ ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ ದುಪ್ಪಟ್ಟು GST?

Published : Jul 05, 2017, 04:03 PM ISTUpdated : Apr 11, 2018, 12:50 PM IST
ಬಿಲ್ ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ ದುಪ್ಪಟ್ಟು GST?

ಸಾರಾಂಶ

ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(GST) ಜುಲೈ ಒಂದರಿಂದ ಜಾರಿಗೆ ಬಂದಿದೆ. ಆದರೆ GST ಜಾರಿಗೊಳಿಸಿದ ಬಳಿಕ ಗೊಂದಲ ಮೂಡಿಸುವಂತಹ ಹಲವಾರು ವಿಚಾರಗಳು ಸದ್ದು ಮಾಡುತ್ತಿವೆ. ಸದ್ಯ ಕ್ರೆಡಿಟ್ ಕಾರ್ಡ್ ವಿಚಾರವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಗೊಂದಲ ಮೂಡಿಸುವಂತಹ ಸಂದೇಶಗಳು ಹರಿದಾಡುತ್ತಿವೆ. ಇದೀಗ GST 'ಆರ್ಕಿಟೆಕ್ಟ್' ಎಂದೇ ಕರೆಯಲ್ಪಡುವ ರಾಜ್ಯ ಸಚಿವ ಹಸ್ಮುಖ್ ಅಧಿಯಾ ಮೈಕ್ರೋ ಬ್ಲಾಗಿಂಗ್ ವೆಬ್'ಸೈಡ್ ಆಗಿರುವ ಟ್ವಿಟರ್'ನಲ್ಲಿ ಈ ಗೊಂದಲವನ್ನು ಪರಿಹರಿಸುವ ಯತ್ನ ಮಾಡಿದ್ದಾರೆ.

ನವದೆಹಲಿ(ಜು.05): ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(GST) ಜುಲೈ ಒಂದರಿಂದ ಜಾರಿಗೆ ಬಂದಿದೆ. ಆದರೆ GST ಜಾರಿಗೊಳಿಸಿದ ಬಳಿಕ ಗೊಂದಲ ಮೂಡಿಸುವಂತಹ ಹಲವಾರು ವಿಚಾರಗಳು ಸದ್ದು ಮಾಡುತ್ತಿವೆ. ಸದ್ಯ ಕ್ರೆಡಿಟ್ ಕಾರ್ಡ್ ವಿಚಾರವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಗೊಂದಲ ಮೂಡಿಸುವಂತಹ ಸಂದೇಶಗಳು ಹರಿದಾಡುತ್ತಿವೆ. ಇದೀಗ GST 'ಆರ್ಕಿಟೆಕ್ಟ್' ಎಂದೇ ಕರೆಯಲ್ಪಡುವ ರಾಜ್ಯ ಸಚಿವ ಹಸ್ಮುಖ್ ಅಧಿಯಾ ಮೈಕ್ರೋ ಬ್ಲಾಗಿಂಗ್ ವೆಬ್'ಸೈಡ್ ಆಗಿರುವ ಟ್ವಿಟರ್'ನಲ್ಲಿ ಈ ಗೊಂದಲವನ್ನು ಪರಿಹರಿಸುವ ಯತ್ನ ಮಾಡಿದ್ದಾರೆ.

ಕೆಲದಿನಗಳಿಂದ ಯುಟಿಲಿಟಿ ಬಿಲ್(ವಿದ್ಯುತ್, ನೀರು, ಮೊಬೈಲ್) ಬಿಲ್ ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಸಿದರೆ ದುಪ್ಪಟ್ಟು GST ಹೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಹಸ್ಮುಖ್ ಇದು ಕೇವಲ ಗಾಳಿಸುದ್ದಿ ಇಂತಹ ವಿಚಾರಗಳಿಗೆ ಗಮನ ನೀಡಬೇಡಿ ಎಂದು ಆಗ್ರಹಿಸಿ 'ಸಾಮಾಜಿಕ ಜಾಲಾತಾಣಗಳಲ್ಲಿ ಯುಟಿಲಿಟಿ ಬಿಲ್ ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಸಿದರೆ ದುಪ್ಪಟ್ಟು GST ಹೇರುತ್ತಾರೆ ಎಂಬ ತಪ್ಪು ಸಂದೇಶ ಹಬ್ಬುತ್ತಿದೆ. ಇದು ಸಂಪೂರ್ಣ ಸುಳ್ಳುಸುದ್ದಿ. ಇಂತಹ ಸುದ್ದಿ ರವಾನಿಸದಿರಿ' ಎಂದಿದ್ದಾರೆ.

ಇನ್ನು ಕ್ರೆಡಟ್ ಕಾರ್ಡ್ ವಿಚಾರದಲ್ಲಿ ಸಚಿವರು ಹೇಳಿದ ಮಾತು ನಿಜವೇ ಅಥವಾ ವೈರಲ್ ಆಗುತ್ತಿರುವ ಸುದ್ದಿ ನಿಜವೇ ಎಂದು ಕಾದು ನೋಡಬೇಕಷ್ಟೇ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ