
ಕಲಬುರಗಿ: ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ನಿಷ್ಠಾ ವಂತ ಕಾರ್ಯಕರ್ತರಾಗಿ ದ್ದಾರೆ. ಪಕ್ಷಕ್ಕೆ ಹಾನಿ ತರುವ ಯಾವುದೇ ಕೆಲಸಕ್ಕೆ ಅವರು ಕೈ ಹಾಕಲ್ಲ ಎಂಬ ವಿಶ್ವಾಸ ನಮಗಿದೆ.
ಶೀಘ್ರದ ಲ್ಲಿಯೇ ಈ ಬಗ್ಗೆ ಜಾರಕಿಹೊಳಿ ಸಹೋದರರ ಜತೆ ಮಾತುಕತೆ ನಡೆಸುತ್ತೇನೆ ಎಂದು ಲೋಕಸಭೆ ಸಂಸ ದೀಯ ಗುಂಪಿನ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ರಮೇಶ್ ತಮಗೆ ಆತ್ಮೀಯನಾಗಿದ್ದು, ಆತ ತುಂಬಾ ಸ್ವಾಭಿಮಾನಿಯಾಗಿದ್ದಾನೆ. ಆದರೆ, ಪಕ್ಷವನ್ನು ಬಿಡಲು ಯಾಕೆ ಮುಂದಾಗಿದ್ದಾರೆ ಎಂಬುದನ್ನು ವಿಚಾರಿಸುವೆ.
ಈ ವಿಚಾರದ ಬಗ್ಗೆ ಸತೀಶ್, ರಮೇಶ್ ಇಬ್ಬರಲ್ಲಿಯೂ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷ ಬಿಡಲು ಇರುವ ಕಾರಣ, ಅತೃಪ್ತಿ ಪತ್ತೆ ಹಚ್ಚಿ ಅವುಗಳ ಶಮನಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.