ಐವರು ಭಾರತೀಯರಿಗಾದ ಸ್ಥಿತಿ ಜಾಧವ್’ಗೂ ಆಗುತ್ತಾ?

Published : Apr 11, 2017, 09:08 AM ISTUpdated : Apr 11, 2018, 01:11 PM IST
ಐವರು ಭಾರತೀಯರಿಗಾದ ಸ್ಥಿತಿ ಜಾಧವ್’ಗೂ ಆಗುತ್ತಾ?

ಸಾರಾಂಶ

ಬೇಹುಗಾರಿಕೆ ಆರೋಪದಡಿ ಭಾರತೀಯ ವ್ಯಕ್ತಿಯೊಬ್ಬನಿಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸುತ್ತಿರುವುದು ಇದೇ ಮೊದಲಲ್ಲ. ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯ ವಿಳಂಬ ಧೋರಣೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ ಐವರು ಭಾರತೀಯರು ಶಿಕ್ಷೆ ಜಾರಿಗೂ ಮೊದಲೇ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ. ಅಂಥವರ ಸಾಲಿಗೆ ಜಾಧವ್‌ ಕೂಡ ಸೇರಿಬಿಡುತ್ತಾರಾ ಎಂಬ ಆತಂಕ ವ್ಯಕ್ತವಾಗತೊಡಗಿದೆ.

1 ಸರಬ್ಜಿತ್‌ ಸಿಂಗ್‌
1990ರಲ್ಲಿ ಗೊತ್ತಿಲ್ಲದೆ ಗಡಿ ದಾಟಿ ಹೋಗಿದ್ದ ಪಂಜಾಬ್‌ ಮೂಲದ ರೈತ ಸರಬ್ಜಿತ್‌ ಸಿಂಗ್‌ರನ್ನು ಭಯೋತ್ಪಾದನೆ ಹಾಗೂ ಬೇಹುಗಾರಿಕೆ ಆರೋಪ ದಲ್ಲಿ ಪಾಕಿಸ್ತಾನ ಬಂಧಿಸಿತ್ತು. 1991ರಲ್ಲಿ ಲಾಹೋರ್‌ ಹೈಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿತ್ತು. 22 ವರ್ಷವಾ ದರೂ ಜಾರಿಯಾಗಿರಲಿಲ್ಲ. 2013ರಲ್ಲಿ ಸಹ ಕೈದಿಗಳು ಸರಬ್ಜಿತ್‌ರನ್ನು ಜೈಲಿನಲ್ಲೇ ಹತ್ಯೆ ಮಾಡಿದ್ದರು.

2 ಕಿರ್ಪಾಲ್‌ ಸಿಂಗ್‌
ವಾಘಾ ಗಡಿ ದಾಟಿದ್ದಕ್ಕೆ ಪಂಜಾಬ್‌ನ ಗುರುದಾಸ್‌ಪುರದ ಕಿರ್ಪಾಲ್‌ ಅವರನ್ನು ಪಾಕಿಸ್ತಾನ 1992ರಲ್ಲಿ ಬಂಧಿಸಿತ್ತು. ಬೇಹುಗಾರಿಕೆ ಹಾಗೂ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. 25 ವರ್ಷ ವಾದರೂ ಶಿಕ್ಷೆ ಜಾರಿಯಾಗಲಿಲ್ಲ. ಲಾಹೋರ್‌ ಜೈಲಿನಲ್ಲೇ ನಿಧನ ಹೊಂದಿದರು.

3 ಚಮೇಲ್‌ ಸಿಂಗ್‌
ಜಮ್ಮುವಿನಲ್ಲಿ 2008ರಲ್ಲಿ ನಾಪತ್ತೆಯಾದ ಚಮೇಲ್‌ ಸಿಂಗ್‌ನನ್ನು ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನ ಬಂಧಿಸಿತ್ತು. ಪಾಕಿಸ್ತಾನ ನೀಡಿದ ಚಿತ್ರ ಹಿಂಸೆಯಿಂ ದಾಗಿ ನಾಲ್ಕು ವರ್ಷಗಳ ಹಿಂದೆ ಚಮೇಲ್‌ ಸಿಂಗ್‌ ಅವರು ಸಾವನ್ನಪ್ಪಿದ್ದರು.

4 ಕಿಶೋರ್‌ ಭಗವಾನ್‌
ಭಾರತೀಯ ಮೀನುಗಾರರಾಗಿದ್ದ ಭಗವಾನ್‌ರನ್ನು ಪಾಕಿಸ್ತಾನ ಬಂಧಿಸಿ ಜೈಲಿನಲ್ಲಿಟ್ಟಿತ್ತು. 2014ರಲ್ಲಿ ಅವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.

5 ಝಾಕೀರ್‌ ಮುಮ್ತಾಜ್‌
ಅಕ್ರಮವಾಗಿ ಗಡಿಯೊಳಕ್ಕೆ ನುಸುಳಿದ ಆರೋಪದಲ್ಲಿ ಪಾಕಿಸ್ತಾನದಿಂದ 2011ರಲ್ಲಿ ಬಂಧಿತರಾಗಿದ್ದರು. ಹೃದಯಾಘಾತಕ್ಕೆ ಬಲಿಯಾದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾಮಾಜಿಕ ಭದ್ರತಾ ಪಿಂಚಣಿಯಲ್ಲಿ 24.55 ಲಕ್ಷ ಅನುಮಾನಾಸ್ಪದ ಫಲಾನುಭವಿಗಳು: ಕೃಷ್ಣ ಬೈರೇಗೌಡ
ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ