ಮೈತ್ರಿ ಬೆಂಬಲಿಸಿದ್ದ BSP ಶಾಸಕ N ಮಹೇಶ್ ಮುಂದಿನ ನಡೆ ಏನು.?

Published : Jul 08, 2019, 02:01 PM ISTUpdated : Jul 08, 2019, 02:04 PM IST
ಮೈತ್ರಿ ಬೆಂಬಲಿಸಿದ್ದ BSP ಶಾಸಕ N ಮಹೇಶ್ ಮುಂದಿನ ನಡೆ ಏನು.?

ಸಾರಾಂಶ

ಸದ್ಯ ರಾಜ್ಯ ರಾಜಕಾರಣದಲ್ಲಿ ಹೈ ಡ್ರಾಮಾ ನಡೆಯುತ್ತಿದ್ದು, ಇದೇ ವೇಳೆ ಮೈತ್ರಿ ಪಡೆಗೆ ಬೆಂಬಲ ನೀಡಿದ್ದ ಕೊಳ್ಳೆಗಾಲ ಶಾಸಕ  ಎನ್ ಮಹೇಶ್ ತಮ್ಮ ಮುಂದಿನ ನಡೆ ಬಗ್ಗೆ ತಿಳಿಸಿದ್ದಾರೆ. 

ಬೆಂಗಳೂರು [ಜು.08] : ಕೊಟ್ಟ ಬೆಂಬಲ ವಾಪಸ್ ಪಡೆಯುವ ಚಾನ್ಸೇ ಇಲ್ಲ ಎಂದು ಕೊಳ್ಳೆಗಾಲ  BSP  ಶಾಸಕ ಎನ್. ಮಹೇಶ್ ಹೇಳಿದ್ದಾರೆ. 

ನಮ್ಮ ನಾಯಕಿ ಮಾಯಾವತಿ ಏನು ಹೇಳುತ್ತಾರೋ ಅದೇ ನಮಗೆ ಫೈನಲ್ ಎಂದಿರುವ ಮಹೇಶ್, ಲೋಕಸಭಾ ಚುನಾವಣೆ ಬಳಿಕ ಬೆಂಬಲ ಮುಂದುವರಿಸುವಂತೆ ಹೆಳಿದ್ದರು. ಅದರಂತೆ  ತಾವು ಬೆಂಬಲ ಮುಂದುವರಿಸುತ್ತಿರುವುದಾಗಿ  ಹೇಳಿದರು.  

ನಾನು ಸ್ವತಂತ್ರ ಶಾಸಕನಲ್ಲ, ನಾ‌ನು ರಾಷ್ಟ್ರೀಯ ಪಕ್ಷದ ಸದಸ್ಯನಾಗಿದ್ದು, ಪಕ್ಷದ ನಿರ್ದೇಶನ ,ನೆಲೆಗಟ್ಟಿನ ಮೇಲೆ ಕಾರ್ಯನಿರ್ವಹಿಸಬೇಕು. ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ನಿರ್ದೇಶನದಂತೆ ಈ ಕ್ಷಣಕ್ಕೆ ಬೆಂಬಲ ಕೊಟ್ಟಿದ್ದೇನೆ. ಮುಂದೆಯೂ ಬೆಂಬಲ ಮುಂದುವರಿಯಲಿದೆ ಎಂದರು.   

ಸದ್ಯದ ಎಲ್ಲಾ ಬೆಳವಣಿಗೆಗಳು ಬಿಎಸ್ ಪಿ ಮುಖಂಡೆ ಮಾಯಾವತಿ ಗಮನಕ್ಕಿದೆ. ಸದ್ಯ ರಾಜ್ಯ ರಾಜಕಾರಣ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಬಿಜೆಪಿ ಹಾಗೂ ಮೈತ್ರಿ ಪಕ್ಷ ಎರಡೂ ಸ್ಟ್ರಾಂಗ್ ಆಗಿವೆ. ಬಿಜೆಪಿ ಅಧಿಕಾರದ ಲಾಲಸೆ ತೋರಿಸುತ್ತಿದ್ದರೆ, ಅತ್ತ ಮೈತ್ರಿ ಸರ್ಕಾರ ಎಲ್ಲಾ ಸಚಿವರ ರಾಜಿನಾಮೆ ಕೊಡಿಸಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದೆ. ರಾಜೀನಾಮೆ ನೀಡಿರುವವರು ಅಭಿವೃದ್ಧಿ, ಜನಪರ ಉದ್ದೇಶ ಇರಿಸಿಕೊಂಡು ರಾಜೀನಾಮೆ ನೀಡಿಲ್ಲ. ಸೈದ್ಧಾಂತಿಕ ವಿಚಾರವಾಹಿಯಾದ ಯಾವೊಬ್ಬ ಶಾಸಕನೂ ರಾಜೀನಾಮೆ ನೀಡಿಲ್ಲ. ಎಲ್ಲರೂ ಸ್ವಾರ್ಥ, ಅಧಿಕಾರದ ಆಸೆಗೆ ಬಿದ್ದು ರಾಜೀನಾಮೆ ನೀಡಿದ್ದಾರೆ. ಬಂಡೆದ್ದರೆಲ್ಲರಿಗೂ ಸಚಿವ ಸ್ಥಾನ ನೀಡಿದರೆ ಸರ್ಕಾರ ಮುನ್ನಡೆಸುವುದು ಕಷ್ಟ ಸಾಧ್ಯ ಎಂದರು. 

ಕರ್ನಾಟಕ ರಾಜಕೀಯದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಅನುದಾನದ ವಿಚಾರವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮಹೇಶ್ , ಈ ಬಗ್ಗೆ ಅತೃಪ್ತಿ ಇದೆ. ಆದರೆ ನಾನು ರಾಜೀನಾಮೆಗೆ ಮುಂದಾಗಿಲ್ಲ. ಎಲ್ಲವೂ ಕೂಡ ಚರ್ಚೆ ಮೂಲಕ ಬಗೆಹರಿಸುವ ವಿಚಾರ. ಮುಂದೇನಾಗುತ್ತದೆಯೋ ಕಾದು ನೋಡೋಣ ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
ಗೃಹಲಕ್ಷ್ಮೀ ಯೋಜನೆ ಹಣ ಬಾಕಿ ಇದ್ರೆ ಕೂಡಲೇ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಭರವಸೆ