
ತ್ರಿಶ್ಯೂರು (ನ.17): ಪ್ರಯಾಣಿಕರಿಂದ ತುಂಬಿದ್ದ ಬಸ್ಸನ್ನು ಕಾಡಾನೊಯೊಂದು ಅಡ್ಡಗಟ್ಟಿಓಡಿಸಿಕೊಂಡು ಬಂದ ಪರಿಣಾಮ, ಬಸ್ ಚಾಲಕ ಬಸ್ಸನ್ನು ಹಿಮ್ಮುಖವಾಗಿ 8 ಕಿ.ಮೀ ಓಡಿಸಿಕೊಂಡು ಬಂದು ಪ್ರಯಾಣಿಕರ ಜೀವ ಕಾಪಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ತೀವ್ರವಾದ ತಿರುವುಗಳ ದಾರಿಯಲ್ಲೂ ಅತ್ಯಂತ ಸಮಾಧಾನವಾಗಿ ಬಸ್ ಅನ್ನು ರಿವರ್ಸ್ನಲ್ಲಿ ಓಡಿಸಿದ ಚಾಲಕ, ಬಸ್ನಲ್ಲಿದ್ದ 40 ಪ್ರಯಾಣಿಕರ ಪ್ರಾಣವನ್ನು ಕಾಪಾಡಿ ಮೆಚ್ಚುಗೆ ಗಳಿಸಿದ್ದಾನೆ. ಈ ಘಟನೆ ವಾಲ್ಪರೈ ಮಾರ್ಗದ ಚಾಲಕುಡಿಯಲ್ಲಿ ಮಂಗಳವಾರ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಸ್ನಲ್ಲಿರುವ ಪ್ರಯಾಣಿಕನೊಬ್ಬ ಈ ಘಟನೆಯ ವಿಡಿಯೋ ಮಾಡಿದ್ದು, ಅದರಲ್ಲಿ ಕಾಡಾನೆಯು ವಿರುದ್ಧ ದಿಕ್ಕಿನಿಂದ ಖಾಸಗಿ ಬಸ್ ಅನ್ನು ಅಟ್ಟಿಸಿಕೊಂಡು ಬರುತ್ತಿರುತ್ತಿರುವುದನ್ನು ನೋಡಬಹುದಾಗಿದೆ. ಇದನ್ನು ಕಂಡ ಪ್ರಯಾಣಿಕರು ಬಸ್ ಚಾಲಕನಿಗೆ ಬಸ್ ತಿರುಗಿಸಲು ಹೇಳಿದರೂ ಕಾಡಿನ ಕಿರಿದಾದ ಹಾದಿಯಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ಆಗ ಚಾಲಕ ಅಂಬುಜಾಕ್ಷನ್ ಬಸ್ ವೇಗಕ್ಕೆ ಹೊಂದಿಕೊಳ್ಳಲಾಗದೇ ಕಾಡಾನೆ ಮರಳುವವರೆಗೂ ಅಂಬಾಲಾಪರಾದಿಂದ ಆನಕ್ಕಯಂವರೆಗೆ ರಿವರ್ಸ್ಗೇರ್ನಲ್ಲೇ ಬಂದಿದ್ದಾನೆ. ಈ ಘಟನೆಗೆ ಕಾರಣವಾದ ಆನೆಯ ಹೆಸರು ‘ಕಬಾಲಿ’ (ರಜನೀಕಾಂತ್ ಚಿತ್ರದ ಹೆಸರು) ಎಂದಾಗಿದ್ದು, ಇದು ಆಗಾಗ ಇದೇ ಮಾರ್ಗದಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸೊಂಡಿಲಿನಿಂದ ಪತ್ರಕರ್ತನ ಕಿವಿಹಿಂಡಿ ಮೂಗೆಳೆದ ಆನೆಮರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.