ಫೇಸ್'ಬುಕ್ ಪರಿಚಯ ಕೊಲೆಯಲ್ಲಿ ಅಂತ್ಯ

Published : May 26, 2018, 04:37 PM IST
ಫೇಸ್'ಬುಕ್ ಪರಿಚಯ ಕೊಲೆಯಲ್ಲಿ ಅಂತ್ಯ

ಸಾರಾಂಶ

ಕೇಬಲ್ ಆಪರೇಟರ್ ಹಾಗೂ ಕಿರಾಣಿ ಅಂಗಡಿ ಮಾಲೀಕನಾಗಿದ್ದ ಸಂಜೀವ್ ಹರೀಶ್ ಬಾಬು ಪತ್ನಿಯನ್ನು ಫೇಸ್'ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಪದೇಪದೇ  ಮೊಬೈಲಿನಲ್ಲಿ ಮಾತನಾಡುತ್ತಿದ್ದ. 

ಶಿಕಾರಿಪುರ(ಮೇ.26): ಫೇಸ್'ಬುಕ್'ನಲ್ಲಿ ಆದ ಪರಿಚಯ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿಕಾರಿಪುರದ ಬಳ್ಳೂರು ಗ್ರಾಮದಲ್ಲಿ ನಡೆದಿದೆ. 
ಸಂಜೀವ್ ಕುಮಾರ್[28] ಕೊಲೆಯಾದವ. ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ ಕಾರಣ  ಎಂಬಾತನನ್ನು ಹರೀಶ್ ಬಾಬು [35] ಕೊಲೆ ಮಾಡಿದ್ದಾನೆ. ಕೇಬಲ್ ಆಪರೇಟರ್ ಹಾಗೂ ಕಿರಾಣಿ ಅಂಗಡಿ ಮಾಲೀಕನಾಗಿದ್ದ ಸಂಜೀವ್ ಹರೀಶ್ ಬಾಬು ಪತ್ನಿಯನ್ನು ಫೇಸ್'ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಪದೇಪದೇ ಮೊಬೈಲಿನಲ್ಲಿ ಮಾತನಾಡುತ್ತಿದ್ದ.

ಇದರಿಂದ ಬೇಸತ್ತ ಹರೀಶ್ ತನ್ನ ಇಬ್ಬರು ಸ್ನೇಹಿತರಾದ ನರಸಿಂಹ ಮೂರ್ತಿ ಹಾಗೂ ಸುರೇಶ್ ಎಂಬುವವರ ಜೊತೆ  ಮೇ.6 ರಂದು ತನ್ನ ಕ್ವಾರಿ ಕರೆಸಿಕೊಂಡು ಅಲ್ಲಿಯೇ ಮಣ್ಣು ಮಾಡಿದ್ದಾರೆ.  ಮೇ. 14 ರಂದು ತಮ್ಮ ಮಗ ಕಾಣೆಯಾಗಿರುವ ಬಗ್ಗೆ ಸಂಜೀವ್ ಅವರ ತಂದೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಪೊಲೀಸರು ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಪ್ರಕರಣ ಬಹಿರಂಗವಾಗಿದೆ. ಮೂವರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?