ವಾಗ್ದಂಡನೆ ಭೀತಿಯಲ್ಲಿ ಅಧ್ಯಕ್ಷ ಟ್ರಂಪ್‌!

Published : Sep 26, 2019, 07:18 AM IST
ವಾಗ್ದಂಡನೆ ಭೀತಿಯಲ್ಲಿ ಅಧ್ಯಕ್ಷ ಟ್ರಂಪ್‌!

ಸಾರಾಂಶ

ವಾಗ್ದಂಡನೆ ಭೀತಿಯಲ್ಲಿ ಅಧ್ಯಕ್ಷ ಟ್ರಂಪ್‌| ಅಧ್ಯಕ್ಷೀಯ ಚುನಾವಣೆ ವಂಚನೆ ಒಪ್ಪಿಕೊಂಡ ವಕೀಲ| 

ವಾಷಿಂಗ್ಟನ್‌: ಅಧ್ಯಕ್ಷ ಚುನಾವಣೆಗೆ ನಿಂತ ದಿನದಿಂದಲೂ ವಿವಾದಿತ ವ್ಯಕ್ತಿಯಾಗಿಯೇ ಕುಖ್ಯಾತಿ ಹೊಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಸಂಸತ್ತಿನಿಂದ ವಾಗ್ದಂಡನೆಗೆ ಗುರಿಯಾಗುವ ಭೀತಿ ಎದುರಿಸುತ್ತಿದ್ದಾರೆ. ಇಂಥದ್ದೊಂದು ಸಾಧ್ಯತೆಯನ್ನು ಮನಗಂಡಿರುವ ಟ್ರಂಪ್‌, ಅಂಥದ್ದು ಏನಾದರೂ ಆದಲ್ಲಿ ದೇಶದ ಆರ್ಥಿಕತೆ ಮಲಗಲಿದೆ ಎಂದು ಎಚ್ಚರಿಸಿದ್ದಾರೆ.

ತಪ್ಪೊಪ್ಪಿಗೆ ಹೇಳಿಕೆ: ಅಧ್ಯಕ್ಷ ಟ್ರಂಪ್‌ಗೆ ವಾಗ್ದಂಡನೆ ಭೀತಿ ಸೃಷ್ಟಿಯಾಗುವುದಕ್ಕೆ ಕಾರಣ, ಅವರ ವಕೀಲ ಮೈಕೆಲ್‌ ಕೋಹೆನ್‌ ಅವರು ನ್ಯಾಯಾಲಯದ ವಿಚಾರಣೆ ವೇಳೆ, ಅಧ್ಯಕ್ಷೀಯ ಚುನಾವಣೆ ವೇಳೆ ತಾವು ಹಲವು ರೀತಿಯ ಅಕ್ರಮ ಎಸಗಿರುವುದನ್ನು ಒಪ್ಪಿಕೊಂಡಿರುವುದು. ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿತ್ತು ಎಂಬ ಪ್ರಕರಣದ ವಿಚಾರಣೆ ವೇಳೆ ಹಾಜರಾಗಿದ್ದ ಕೋಹೆನ್‌, ಟ್ರಂಪ್‌ ಅವರ ಪರವಾಗಿ ತಾವು ತೆರಿಗೆ ವಂಚನೆ ಮಾಡಿರುವುದನ್ನು, ಬ್ಯಾಂಕ್‌ ಸ್ಟೇಟ್‌ಮೆಂಟ್‌ ಕುರಿತು ಸುಳ್ಳು ಮಾಹಿತಿ ನೀಡಿರುವುದನ್ನು, ಪ್ರಚಾರಕ್ಕೆ ಬಳಸಿದ ಹಣದ ಲೆಕ್ಕಪತ್ರದಲ್ಲಿ ವಂಚನೆ ಮಾಡಿರುವುದನ್ನು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಟ್ರಂಪ್‌ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಸ್ಟೋರ್ಮಿ ಡೇನಿಯಲ್ಸ್‌ ಸೇರಿದಂತೆ ಇಬ್ಬರು ನೀಲಿ ಚಿತ್ರಗಳ ನಟಿಯರಿಗೆ ಈ ವಿಷಯವನ್ನು ಬಾಯಿಬಿಡದಂತೆ ಹಣ ನೀಡಿದ್ದ ವಿಷಯವನ್ನು ಒಪ್ಪಿಕೊಂಡಿದ್ದಾರೆ.

ಈ ವಿಷಯ ಮುಂದಿಟ್ಟುಕೊಂಡೇ ವಿಪಕ್ಷ ಡೆಮಾಕ್ರೆಟ್‌ ಸಂಸದರು ಟ್ರಂಪ್‌ ವಿರುದ್ಧ ವಾಗ್ದಂಡನೆಗೆ ಮುಂದಾಗುವ ಎಲ್ಲಾ ಸಾಧ್ಯತೆ ಇದೆ ಎಂದು ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್‌ರ ಸಲಹೆಗಾರರಾಗಿದ್ದ ಮೈಕೆಲ್‌ ಕ್ಯಾಪ್ಟೋ ಹೇಳಿದ್ದಾರೆ.

ಆರ್ಥಿಕತೆ ಪತನ: ಈ ನಡುವೆ ತಮಗೆ ವಾಗ್ದಂಡನೆ ವಿಧಿಸುವ ಕುರಿತ ಸುದ್ದಿಗಳ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ಇದೇನಾದರೂ ನಿಜವಾದಲ್ಲಿ, ಮಾರುಕಟ್ಟೆಕುಸಿದುಬೀಳಲಿದೆ. ಅಮೆರಿಕದ ಆರ್ಥಿಕತೆ ಪತನವಾಗಲಿದೆ. ಅಮೆರಿಕ ನಾಗರಿಕರು ಮತ್ತೆ ಚೇತರಿಸಿಕೊಳ್ಳಲಾಗದ ರೀತಿಯಲ್ಲಿ ಬಡವರಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ