
ನವದೆಹಲಿ[ಆ.16] ಹಾಗಾದರೆ ಅಟಲ್ ಬಿಹಾರಿ ವಾಜಪೇಯಿ ಬ್ರಹ್ಮಚಾರಿಯಾಗಿಯೇ ಉಳಿಯಲು ಏನು ಕಾರಣ? ಕವಿಯಾಗಿದ್ದ ಅಟಲ್ ಜೀವನದಲ್ಲಿ ಪ್ರೇಮದ ಪಾಠ ಮೂಡಲೇ ಇಲ್ಲವೇ?
ಅಖಂಡ ಬ್ರಹ್ಮಚಾರಿಯಾಗಿಯೇ 93 ವರ್ಷಗಳ ಪಯಣವನ್ನು ಅವರು ಮುಗಿಸಿದರು. ತಾವೇಕೆ ಮದುವೆಯಾಗಲಿಲ್ಲ ಎಂಬ ಪ್ರಶ್ನೆಗೆ ಅವರೇ ಹಲವಾರು ಬಾರಿ ಸ್ವಾರಸ್ಯಕರವಾಗಿ ಉತ್ತರ ನೀಡಿದ್ದಾರೆ. ಆ ಉತ್ತರದಲ್ಲಿ ಸತ್ಯ ಹುಡುಕುವುದಕ್ಕಿಂತ ಹಾಗೆ ಇದ್ದುಬಿಡುವುದು ಒಳ್ಳೆಯದು.
ಬಣ್ಣದೋಕುಳಿಯಾಡಿ ಮೋದಿಯೊಂದಿಗೆ ನರ್ತಿಸಿದ್ದ ವಾಜಪೇಯಿ
ಪತ್ರಕರ್ತರೊಬ್ಬರು ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ "ಯಾವುದೇ ಮಹಿಳೆ ನನ್ನನ್ನು ಸೂಕ್ತ ವರ ಎಂದು ಪರಿಗಣಿಸಲಿಲ್ಲ" ಎಂಬ ಉತ್ತರ ನೀಡಿದ್ದರು. ಮತ್ತೊಮ್ಮೆ ನನಗೆ ಮದುವೆಯಾಗಲು ಸಮಯವೇ ಸಿಗಲಿಲ್ಲ ಎಂದು ಹೇಳಿದ್ದರು. ಮದುವೆಯಾಗದಿದ್ದರೂ ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕಿ ಸಲುಹಿ ಜವಾಬ್ದಾರಿಯುತ ತಂದೆಯಾಗಿ ಕರ್ತವ್ಯ ಪೂರೈಸಿದ್ದರು.
ವಾಜಪೇಯಿ ಬಗ್ಗೆ ಗೊತ್ತಿರದ 10 ಸಂಗತಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.