
ಬೆಂಗಳೂರು(ಜೂ.21): ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಗೃಹ ಸಚಿವ ಹೊಣೆಗಾರಿಕೆ ಬುಧವಾರ ಮುಕ್ತಾಯಗೊಳ್ಳ ಲಿದ್ದು, ಈಗಾಗಲೇ ಅವರು ಈ ಹುದ್ದೆಗೆ ನೀಡಿರುವ ರಾಜೀ ನಾಮೆ ಪತ್ರ ಒಂದೆರಡು ದಿನಗ ಳಲ್ಲಿ ರಾಜ್ಯಪಾಲರಿಗೆ ರವಾನೆ ಯಾಗಲಿದೆ. ಇದರ ಬೆನ್ನಲ್ಲೇ ಮುಂದಿನ ಗೃಹ ಸಚಿವ ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಖಾತೆಯನ್ನು ತಾವೇ ನಿಭಾಯಿಸಲಿದ್ದಾ ರೆಯೇ ಅಥವಾ ಬೇರೆ ಯಾರಿಗಾದರೂ ನೀಡಲಿದ್ದಾರೆಯೇ? ನೀಡಲಿ ದ್ದರೆ, ಯಾವಾಗ ಎಂಬ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ ಪರಮೇಶ್ವರ್ ಅವರೇ ಈ ಹೊಣೆ ಗಾರಿಕೆಯನ್ನು ಇನ್ನೂ ಕೆಲ ತಿಂಗಳು ನಿರ್ವಹಿಸಲಿ ಎಂಬ ಉದ್ದೇಶ ಸಿಎಂ ಸಿದ್ದರಾಮಯ್ಯ ಅವರಿಗೆ ಇತ್ತು.
ಈ ಬಗ್ಗೆ ಸಿಎಂ ಅವರು ಒಂದೆರಡು ಬಾರಿ ಪರಮೇಶ್ವರ್ ಅವರಿಗೆ ಸೂಚನೆಯನ್ನೂ ನೀಡಿದ್ದರು. ಸಿಎಂ ಅವರ ಈ ನಿಲುವಿಗೆ ಸಂಪುಟದ ಬಹುತೇಕ ಹಿರಿಯ ಸಚಿವರು ತಾವು ಹಾಲಿ ನಿರ್ವಹಿಸುತ್ತಿರುವ ಖಾತೆಯನ್ನು ತ್ಯಜಿಸಿ ಗೃಹ ಖಾತೆಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲದಿರುವುದು ಕಾರಣ ಎನ್ನಲಾಗುತ್ತಿದೆ.
ಆದರೆ, ಈಗಾಗಲೇ ರಾಜೀನಾಮೆ ನೀಡಿರುವುದರಿಂದ ಅಧಿಕಾರಿ ವರ್ಗಕ್ಕೆ ಸ್ಪಷ್ಟಸಂದೇಶ ಹೋಗಿದೆ. ಇನ್ನೂ ಖಾತೆ ಯಲ್ಲಿ ಮುಂದುವರೆದರೆ ನಿಯಂತ್ರಣ ಕಷ್ಟಎಂಬ ಕಾರಣಕ್ಕೆ ಪರಮೇಶ್ವರ್ ಅವರು ಹೊಣೆಗಾರಿಕೆ ಸಾಕು ಎಂದು ಸಿಎಂ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ. ಹೀಗಾಗಿ ಪರಮೇಶ್ವರ್ ಅವರು ಗೃಹ ಖಾತೆಗೆ ನೀಡಿರುವ ರಾಜೀನಾಮೆಯನ್ನು ಸಿದ್ದರಾಮಯ್ಯ ಅವರು ಒಂದೆರಡು ದಿನಗಳಲ್ಲಿ ರಾಜ್ಯಪಾಲರಿಗೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ.
ಸದ್ಯಕ್ಕೆ ಸಿಎಂ ಬಳಿಯೇ ಗೃಹ ಖಾತೆ:
ಪರಮೇಶ್ವರ್ ಶೀಘ್ರ ಖಾತೆಯಿಂದ ವಿಮುಕ್ತಿ ಪಡೆಯಲು ಬಯಸಿರುವುದು ಹಾಗೂ ಹಿರಿಯ ಸಚಿವರು ಈ ಖಾತೆಯನ್ನು ವಹಿಸಿಕೊಳ್ಳಲು ಸಜ್ಜಾಗದೇ ಇರುವುದರಿಂದ ಸಚಿವ ಸಂಪುಟ ವಿಸ್ತರಣೆವರೆಗೂ ಗೃಹ ಖಾತೆಯನ್ನು ತಾತ್ಕಾಲಿಕವಾಗಿ ತಾವೇ ನಿರ್ವಹಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ವಲಯಗಳು ಹೇಳುತ್ತವೆ. ವಾಸ್ತವವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಖಾತೆಯನ್ನು ನಿರ್ವಹಿಸುವಂತೆ ತಮ್ಮ ಆಪ್ತ ಸಚಿವ ಮಹದೇವಪ್ಪ ಅವರಿಗೆ ಸೂಚಿಸಿದ್ದರು. ಆದರೆ, ಲೋಕೋ ಪಯೋಗಿ ಖಾತೆಯಂತಹ ಮಹತ್ವದ ಖಾತೆ ಹೊಣೆ ಹೊತ್ತಿರುವ ಮಹದೇವಪ್ಪ ಗೃಹ ಖಾತೆಯ ಭಾರವನ್ನು ಹೊರಲು ತಯಾರಿಲ್ಲ. ಇನ್ನು ಕೆ.ಜೆ. ಜಾಜ್ರ್ ಅವರಂತೂ ಸುತರಾಂ ಈ ಹೊಣೆಗಾರಿಕೆಗೆ ತಯಾರಿಲ್ಲ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಹೈಕಮಾಂಡ್ ಈ ಹೊಣೆಯನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನೀಡಬಹುದೇ ಪರಿಶೀಲಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ. ಆದರೆ, ಶಿವಕುಮಾರ್ಗೆ ಈ ಖಾತೆಯನ್ನು ನೀಡಲು ಸಿಎಂ ಸಿದ್ದರಾಮಯ್ಯ ಸುತರಾಂ ತಯಾರಿಲ್ಲ. ಹೀಗಾಗಿ ಹಿರಿಯ ಸಚಿವರಾದ ದೇಶಪಾಂಡೆ ಹಾಗೂ ಎಚ್.ಕೆ.ಪಾಟೀಲ್ ಅವರಂತಹ ಹೆಸರುಗಳು ಚಾಲ್ತಿಗೆ ಬಂದಿದೆ. ಆದರೆ, ಈ ಯಾವ ಸಚಿವರೂ ತಾವು ಹಾಲಿ ನಿರ್ವಹಿಸುತ್ತಿರುವ ಖಾತೆಯ ಬದಲಿಗೆ ಗೃಹ ಖಾತೆ ಹೊಣೆ ಹೊರಲು ತಯಾರಿಲ್ಲ. ಬದಲಾಗಿ, ಹೆಚ್ಚುವರಿಯಾಗಿ ಗೃಹ ಖಾತೆ ದೊರಕಿದರೆ ನಿರ್ವಹಿಸಲು ಸಿದ್ಧರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಹತ್ವದ ಗೃಹ ಖಾತೆಯನ್ನು ಹೆಚ್ಚುವರಿ ಯಾಗಿ ನೀಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನಸಿಲ್ಲ.
ಈ ಸಂಕೀರ್ಣ ಸಂದರ್ಭವನ್ನು ನಿಭಾಯಿಸಲು ಸಿದ್ದರಾಮಯ್ಯ ಎರಡು ರೀತಿಯ ಚಿಂತನೆ ಹೊಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ. 1- ತಾವೇ ಈ ಖಾತೆಯನ್ನು ತಮ್ಮ ಆಪ್ತ ಹಾಗೂ ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ ಅವರ ನೆರವಿನಿಂದ ನಿರ್ವಹಿಸುವುದು.
2- ಸಂಪುಟ ವಿಸ್ತರಣೆ ವೇಳೆ ಹಿರಿಯ ಸಚಿವರಲ್ಲಿ ಕೆಲವರ ಖಾತೆಗಳನ್ನು ಬದಲಾವಣೆ ಮಾಡುವುದು. ಆ ಸಂದರ್ಭದಲ್ಲಿ ಒಬ್ಬರಿಗೆ ಗೃಹ ಖಾತೆಯನ್ನು ಪರಿಪೂರ್ಣವಾಗಿ ವಹಿಸುವುದು. ಈ ಎರಡರ ಪೈಕಿ ಯಾವ ಹಾದಿಯನ್ನು ಅಂತಿಮವಾಗಿ ತುಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.