ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ಕಾರಣ ಯಾರು..?

Published : Dec 25, 2018, 11:15 AM IST
ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ಕಾರಣ ಯಾರು..?

ಸಾರಾಂಶ

ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಇನ್ನು ರಾಮಲಿಂಗಾ ರೆಡ್ಡಿ ಅವರಿಗೂ ಕೂಡ ಸಚಿವ ಸ್ಥಾನ ತಪ್ಪಿದ್ದು, ಇದಕ್ಕೆ ತಾವು ಕಾರಣ ಅಲ್ಲ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ. 

ತುಮ​ಕೂರು: ರಾಮ​ಲಿಂಗಾ ರೆಡ್ಡಿ ಅವರಿಗೆ ಮಂತ್ರಿ ಪದವಿ ತಪ್ಪಲು ನಾನು ಕಾರಣವಲ್ಲ. ಅದು ಪಕ್ಷದ ತೀರ್ಮಾನ ಎಂದು ಉಪ​ಮು​ಖ್ಯ​ಮಂತ್ರಿ ಡಾ. ಜಿ. ಪರ​ಮೇ​ಶ್ವರ್‌ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿದ ಅವರು, ಸಚಿವ ಸಂಪುಟದ ವಿಸ್ತ​ರಣೆ ವೇಳೆ ಅಸಮಾಧಾನ ಉಂಟಾಗುವುದು ಸಹಜ. ವರಿ​ಷ್ಠರು ಯಾರನ್ನು ಮಂತ್ರಿ ಮಾಡ​ಬೇಕು, ಯಾರಿಗೆ ಆದ್ಯತೆ ನೀಡ​ಬೇಕು ಎಂದು ನಮ್ಮಲ್ಲಿ ಸಲಹೆ ಕೇಳು​ತ್ತಾರೆ ಅಷ್ಟೆ. ಇವ​ರನ್ನೇ ಮಾಡಿ ಅಂತಾ ಹೇಳಿ​ದರೆ ಹೈಕ​ಮಾಂಡ್‌ ಕೇಳಲ್ಲ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತ​ರ​ಣೆ ವೇಳೆ ನನ್ನ ಅಥವಾ ಸಿದ್ದ​ರಾ​ಮಯ್ಯ ಅವರ ಕೈ ಮೇಲಾ​ಗಿದೆ ಎನ್ನು​ವುದು ಮಾಧ್ಯ​ಮ​ದ​ವರ ಊಹೆ. ಯಾರ ಕೈ ಮೇಲೂ ಆಗಿಲ್ಲ, ಕೆಳಗೂ ಆಗಿಲ್ಲ. ಶಾಸಕರು ಹಾಗೂ ಸಚಿವರ ಪ್ರತಿಕ್ರಿಯೆ ಬಗ್ಗೆ ಬರುತ್ತಿರುವ ವಿಚಾರಗಳ ಬಗ್ಗೆ ವಾಸ್ತವ ತಿರುಚಲಾಗುತ್ತಿದೆ ಎಂದರು.

ರಮೇಶ್‌ ಜಾರಕಿಹೊಳಿ ರಾಜೀನಾಮೆ ವಿಚಾರ ಗೊತ್ತಿಲ್ಲ, ಅವರ ಮನ​ವೊ​ಲಿ​ಸುವ ಯತ್ನ ಮಾಡು​ತ್ತೇನೆ. ಹಾಗೆಯೇ ಖರ್ಗೆ ಅವರ ಬಳಿಯೂ ಮಾತ​ನಾ​ಡು​ತ್ತೇನೆ. ಎಂ.ಬಿ.ಪಾಟೀ​ಲ್‌ಗೆ ಗೃಹ ಖಾತೆ ನೀಡುವ ಕುರಿತು ಯಾವುದೇ ಚರ್ಚೆ ನಡೆ​ದಿಲ್ಲ. ಅದನ್ನು ಹೈಕ​ಮಾಂಡ್‌ ನಿರ್ಧ​ರಿ​ಸು​ತ್ತದೆ ಎಂದ​ರು.

ಒಂದು ವಾರದಲ್ಲಿ ಎಲ್ಲ ಗೊಂದಲವೂ ತಿಳಿಯಾಗಲಿದೆ. ಜೆಡಿಎಸ್‌ನಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಅವರು ತುಂಬು​ತ್ತಾರೆ. ಸದ್ಯಕ್ಕೆ ಯಾವುದೇ ತೊಂದ​ರೆ​ಯಿಲ್ಲ. ಸರ್ಕಾರ ಸುಭ​ದ್ರ​ವಾ​ಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ