ಶೀಘ್ರವೇ ಧಾರವಾಡ ಐಐಟಿಗೆ ಮೋದಿ ಶಂಕು?

Published : Dec 25, 2018, 10:59 AM IST
ಶೀಘ್ರವೇ ಧಾರವಾಡ ಐಐಟಿಗೆ ಮೋದಿ ಶಂಕು?

ಸಾರಾಂಶ

ಜನ​ವ​ರಿಯಲ್ಲಿ ನಡೆ​ಯ​ಲಿ​ರುವ ಧಾರ​ವಾಡ ಐಐಟಿ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವ​ರಿಗೆ ಆಮಂತ್ರಣ ನೀಡಿದ್ದು, ಅವರು ಆಗಮಿಸುವ ಸಾಧ್ಯತೆ ಇದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ಧಾರವಾಡ :  ಜನ​ವ​ರಿಯಲ್ಲಿ ನಡೆ​ಯ​ಲಿ​ರುವ ಧಾರ​ವಾಡ ಐಐಟಿ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವ​ರಿಗೆ ಆಮಂತ್ರಣ ನೀಡಿದ್ದು, ಅವರು ಆಗಮಿಸುವ ಸಾಧ್ಯತೆ ಇದೆ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. 

ಕಾರ‍್ಯಕ್ರಮವೊಂದರಲ್ಲಿ ಮಾತನಾಡಿದ ಅವರು, .3 ಸಾವಿರ ಕೋಟಿ ವೆಚ್ಚದಲ್ಲಿ ಐಐಟಿ ನಿರ್ಮಾಣವಾಗಲಿದ್ದು, ಈಗಾಗಲೇ .1,200 ಕೋಟಿ ಬಿಡುಗಡೆಯಾಗಿದೆ. ಮುಂದಿನ ತಿಂಗಳು ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರು ಆಗಮಿಸಿ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಪ್ರಧಾನಿಯವರ ಆಪ್ತ​ ಸ​ಹಾ​ಯ​ಕ​ರ ಜತೆಗೆ ಮಾತುಕತೆ ನಡೆದಿದೆ ಎಂದು ಹೇಳಿದರು.

ಇನ್ನು ಬಿಐಎಸ್‌ (ಬ್ಯೂರೋ ಆಫ್‌ ಇಂಡಿ​ಯನ್‌ ಸ್ಟ್ಯಾಂಡ​ರ್ಸ್) ಕಚೇರಿ ಶೀಘ್ರ ನಿರ್ಮಾಣವಾಗಲಿದ್ದು, ಇದರಿಂದ ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ಸಾಕಷ್ಟುಅನುಕೂಲವಾಗಲಿದೆ. ಇದರ ಉದ್ಘಾಟನೆಗೆ ರಾಮ್‌ವಿಲಾಸ್‌ ಪಾಸ್ವಾನ್‌ ಬರಲಿದ್ದಾರೆ ಎಂದರು.

ರಾಮನಗರದಲ್ಲಿ ಏಮ್ಸ್‌ಗೆ ವಿರೋಧ:  ಇನ್ನು, ರಾಜ್ಯಕ್ಕೆ ಮಂಜೂರಾದ ಏಮ್ಸ್‌ (ಆಲ್‌ ಇಂಡಿಯಾ ಮೆಡಿಕಲ್‌ ಸೈನ್ಸ್‌) ನಿರ್ಮಾಣಕ್ಕೆ ರಾಜ್ಯದ ಧಾರವಾಡ, ರಾಮನಗರ, ವಿಜಯಪುರಗಳ ಹೆಸರು ಪ್ರಸ್ತಾವನೆಯಲ್ಲಿತ್ತು. ಪ್ರಸ್ತುತ ಜೆಡಿಎಸ್‌ ಅದನ್ನು ರಾಮನಗರದಲ್ಲಿ ನಿರ್ಮಿಸಲು ತೀರ್ಮಾನ ಕೈಗೊಂಡಿದೆ. ಇದರಿಂದ ಪ್ರಯೋಜನವಿಲ್ಲ. ಧಾರವಾಡದಲ್ಲಿ ಏಮ್ಸ್‌ ನಿರ್ಮಿಸಲು ಸಮಸ್ಯೆಯಿದ್ದರೆ ವಿಜಯಪುರದಲ್ಲಾದರೂ ಉತ್ತಮ ಅವಕಾಶವಿದೆ. ಆದರೆ ಸಮ್ಮಿಶ್ರ ಸರ್ಕಾರದ ಪಾಲುದಾರ ಜೆಡಿಎಸ್‌ ರಾಮನಗರದಲ್ಲಿ ನಿರ್ಮಿಸಲು ನಿರ್ಧಾರ ಕೈಗೊಂಡು ಮುಂದುವರಿದರೆ ತೀವ್ರ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್