ರಸಋಷಿ ಕುವೆಂಪುಗೆ ಗೂಗಲ್ ಡೂಡಲ್ ಗೌರವ: ಯಾರ ಕಲೆಯಿದು?

Published : Dec 29, 2017, 03:20 PM ISTUpdated : Apr 11, 2018, 12:57 PM IST
ರಸಋಷಿ ಕುವೆಂಪುಗೆ ಗೂಗಲ್ ಡೂಡಲ್ ಗೌರವ: ಯಾರ ಕಲೆಯಿದು?

ಸಾರಾಂಶ

- ರಸಋಷಿಗೆ ಗೌರವ ಸೂಚಿಸಿದ ಗೂಗಲ್ - ಡೂಡಲ್ ಗ್ರಾಫಿಕ್ಸ್ ಮಾಡಿದ್ದು ಕೊಲ್ಕತ್ತಾ ಮೂಲದ ಕಲಾವಿದ. - ಕನ್ನಡ ಫಾಂಟ್‌ಗೆ ಸಹಕರಿಸಿದ್ದು ಬೆಂಗಳೂರು ಮೂಲದ ಮಹಿಳೆ.  

ಬೆಂಗಳೂರು: ಗೂಗಲ್‌ನಂಥ ಅಮೆರಿಕ ಮೂಲದ ಸರ್ಚ್ ಎಂಜಿನ್ ಕಂಪನಿಯೊಂದು ಭಾರತದ ಸಾಧಕರಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸೂಚಿಸಿದರೆ ಸಾಕು, ನಮಗೆ ಎಲ್ಲಿಲ್ಲದ ಸಂಭ್ರಮ. ಅಂಥದ್ರಲ್ಲಿ ಇಂದು ಯುಗದ ಕವಿ, ಜಗದ ಕವಿ, ರಾಮಾಯಣ ದರ್ಶನಂ ಬರೆದ ಕವಿಯನ್ನು ಗೌರವಿಸಿದ್ದು, ಇಡೀ ಭಾರತೀಯರಿಗೇ ಹೆಮ್ಮೆಯ ವಿಷಯ. ಅದರಲ್ಲಿಯೂ ಗೂಗಲ್ ಡೂಡಲ್‌ನಲ್ಲಿ ಕನ್ನಡದ ಅಕ್ಷರಗಳಿರುವುದು ಕನ್ನಡಿಗರ ಅಭಿಮಾನವನ್ನು ನೂರ್ಮಡಿಗೊಳಿಸಿದೆ.

ಮಲೆನಾಡಿನ ಹಸಿರು ಪರಿಸರ, ಕಾಡು, ಕವಿಶೈಲದ ಬಂಡೆ ಕಲ್ಲಿನ ಮೇಲೆ ಕುಳಿತು ಬರೆಯುವುದರಲ್ಲಿ ತಲ್ಲೀನರಾದ ಕುವೆಂಪು ಚಿತ್ರವನ್ನು ಗ್ರಾಫಿಕ್ಸ್ ಮಾಡಿದ ಕಲಾವಿದ ಯಾರು ಗೊತ್ತಾ? 

 

ಕೊಲ್ಕತ್ತಾ ಮೂಲದ ಉಪಮನ್ಯು ಭಟ್ಟಚಾರ್ಯ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಬರೆದು ಕೊಂಡಿರುವ ಕಲಾವಿದ, 'ಕನ್ನಡದ ಮಹಾನ್ ಸಾಹಿತಿ ಕುವೆಂಪು ಹುಟ್ಟುಹಬ್ಬದ ಸಲುವಾಗಿ ಗ್ರಾಫಿಕ್ಸ್ ಮಾಡಿಕೊಡುವಂತೆ ಗೂಗಲ್ ನನ್ನನ್ನು ಕೇಳಿದ್ದನ್ನು ಇನ್ನೂ ನಂಬಲಾಗುತ್ತಿಲ್ಲ. ಬೆಂಗಳೂರು ಮೂಲದ ಸ್ವಾತಿ ಸುನಿಲ್ ಶೇಲರ್ ಕನ್ನಡವನ್ನು ಟೈಪಿಸಲು ಸಹಕರಿಸಿದ್ದಾರೆ,  ಎಂದು ಈ ಗ್ರಾಫಿಕ್ಸ್ ಸೃಷ್ಟಿಸಲು ಸಹಕರಿಸಿ ಸರ್ವರಿಗೂ ಥ್ಯಾಂಕ್ಸ್,' ಎಂದಿದ್ದಾರೆ ಭಟ್ಟಚಾರ್ಯ.

ವರನಟ ರಾಜ್‌ಕುಮಾರ್ ನಂತರ ಡೂಡಲ್ ಮೂಲಕ ಗೂಗಲ್ ಗೌರವ ಸೂಚಿಸಿದ ಎರಡನೇ ಕನ್ನಡಿಗ ಕುವೆಂಪು. ಈ ಬಗ್ಗೆ ರಾಷ್ಟ್ರಮಟ್ಟದ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿ, ಕುವೆಂಪು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ