
ನವದೆಹಲಿ(ಆ.29): 2022ಕ್ಕೆ ಇಸ್ರೋ ಮಾನವಸಹಿತ ಗಗನಯಾತ್ರೆ ಕೈಗೊಳ್ಳಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಯೋಜನೆಗೆ ಗಗನ್ ಯಾನ್ ಎಂದು ಈಗಾಗಲೇ ಹೆಸರಿಡಲಾಗಿದೆ. ಆದರೆ ಬಾಹ್ಯಾಕಾಶಕ್ಕೆ ಹೋಗಲಿರುವ ಮೂವರು ಭಾರತೀಯ ಗಗನಯಾನಿಗಳು ಯಾರು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
ಇಸ್ರೋದ ಗಗನ್ ಯಾನ್ ಯೋಜನೆಯಂತೆ ಬಾಹ್ಯಾಕಾಶಕ್ಕೆ ಹೋಗಲಿರುವ ಮೂವರು ಗಗನಯಾತ್ರಿಗಳು ಯಾರು ಎಂಬ ಕುರತೂಹಲ ಇದೀಗ ಮೂಡಿದೆ. ಈ ಗಗನಯಾತ್ರಿಗಳಿಗೆ ಎಲ್ಲಿ ಮತ್ತು ಹೇಗೆ ತರಬೇತಿ ನೀಡಲಾಗುತ್ತದೆ ಎಂಬ ಪ್ರಶ್ನೆಗಳೂ ಮೂಡುವುದು ಸಹಜ.
ಆದರೆ ಸಾಮಾಜಿಕ ಜಾಲತಾಣಗಳು ಈ ಕುರಿತು ತಮ್ಮದೇ ಆದ ಅಭಿಪ್ರಾಯ ಹೊಂದಿದ್ದು, ಅದರಂತೆ ಗಗನ್ ಯಾನ್ ಯೋಜನೆಯಂತೆ ಬಾಹ್ಯಾಕಾಶಕ್ಕೆ ಕಾಲಿಡುವ ಮೂವರು ಭಾರತೀಯರು ಯಾರು ಎಂಬುದನ್ನು ಪತ್ತೆ ಹಚ್ಚಿವೆ.
ಅದರಂತೆ ಪ್ರಧಾನಿ ನರೇಂದ್ರ ಮೋದಿ, ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಗುಜರಾತ್ ಉದ್ಯಮಿ ಅದಾನಿ ಅವರೇ ಗಗನಯಾತ್ರೆ ಕೈಗೊಳ್ಳಲಿರುವ ಭಾರತೀಯರಂತೆ.
ಕುರಿತು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದ್ದು, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ಭೂಮಿಯ ಹೊರತಾಗಿ ಬೇರೊಂದು ಜಾಗ ಹುಡುಕಲು ಈ ಮೂವರೂ ಗಗನಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಅಪಹಾಸ್ಯ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.