
ಪಣಜಿ[ಮಾ.18]: ಇತ್ತೀಚೆಗೆ ಮಾಂಡೋವಿ ಸೇತುವೆ (ಅಟಲ್ ಸೇತು) ಉದ್ಘಾಟನೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಮನೋಹರ್ ಪರ್ರಿಕರ್ ಅವರು ಆಡಿದ ಕೊನೆಯ ಸಾರ್ವಜನಿಕ ನುಡಿಯೆಂದರೆ ‘ಹೌ ಈಸ್ ದ ಜೋಶ್’? (ನಿಮ್ಮಲ್ಲಿ ಹೇಗಿದೆ ಜೋಶ್).
ರೋಗದಿಂದ ತತ್ತರಿಸಿ ಅತ್ಯಂತ ಕೃಶರಾಗಿದ್ದ ಪರ್ರಿಕರ್ ಅವರು ಮೂಗಿಗೆ ಆಮ್ಲಜನಕದ ನಳಿಕೆಯನ್ನು ಹಾಕಿಕೊಂಡೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ ಪರ್ರಿಕರ್, ‘ಹೌ ಇಸ್ ದ ಜೋಶ್? ನಾನು ನಿಮಗೆ (ಜನರಿಗೆ) ಸ್ಪಲ್ಪ ಜೋಶ್ ವರ್ಗಾಯಿಸುತ್ತೇನೆ. ಇಲ್ಲೇ ಕುಳಿತು ಸ್ವಲ್ಪ ಮಾತನಾಡುತ್ತೇನೆ. ನನ್ನ ಬಾಕಿ ಜೋಶ್ ಅನ್ನು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಇರಿಸಿಕೊಳ್ಳುತ್ತೇನೆ’ ಎಂದು ಮಾರ್ಮಿಕವಾಗಿ ಹೇಳಿದ್ದರು.
ಆದರೆ ವಿಧಿಯಾಟವು ಅವರನ್ನು ಲೋಕಸಭೆ ಚುನಾವಣೆಗೆ ಮುನ್ನವೇ ಕರೆದೊಯ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.