
ಬಾಕು(ಅಝರ್ಬೈಜಾನ್): ಮುಂಬೈ-ಲಂಡನ್ಗೆ ಬ್ರಿಟಿಷ್ ಏರ್ವೇಸ್ ವಿಮಾನದ ಕ್ಯಾಬಿನ್ನಲ್ಲಿ ಹೊಗೆ ಉಂಟಾದ ಪರಿಣಾಮ ವಿಮಾನ ಅಝರ್ ಬೈಜಾನ್ನಲ್ಲಿ ತುರ್ತು ಭೂಸ್ಪರ್ಶವಾಯಿತು.
ಈ ವೇಳೆ ಪ್ರಯಾಣಿಕರ ಪೈಕಿ ನಾನೂ ಓರ್ವಳಾಗಿದ್ದು, ಪಡಬಾರದ ಕಷ್ಟಪಟ್ಟೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ನ ಮಾಜಿ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅಳಲು ತೋಡಿಕೊಂಡಿದ್ದಾರೆ. ‘ಅಝರ್ಬೈಜಾನ್ ರಾಜಧಾನಿ ಬಾಕು ವಿಮಾನ ನಿಲ್ದಾಣದಲ್ಲಿ ನಮಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲು 19 ತಾಸು ವಿಳಂಬ ವಾಯಿತು. ನಾವೆಲ್ಲ ಪ್ರಯಾಣಿಕರು ನಿರೀಕ್ಷಣಾ ಕೊಠಡಿಯ ನೆಲಹಾಸಿನ ಮೇಲೆಯೇ ಮಲಗಿದೆವು. ನಮ್ಮ ಬ್ಯಾಗ್ಗಳನ್ನು ತೆಗೆದುಕೊಳ್ಳಲು ನಿರಾಕರಿಸಲಾಗಿತ್ತು. ಬ್ಯಾಗಿನಲ್ಲಿ ಬಿಟ್ಟಿದ್ದ ಮಾತ್ರೆಗಳನ್ನು ಸೇವಿಸಲೂ ಸಾಧ್ಯವಾಗಿರಲಿಲ್ಲ ಉಪಾಹಾರವನ್ನೂ ನೀಡಲಿಲ್ಲ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.