ವಾಟ್ಸ್ಆ್ಯಪ್ ಜಗಳ: ಅಡ್ಮಿನ್ ಮೇಲೆ ಹಲ್ಲೆ!

Published : Oct 28, 2017, 04:14 PM ISTUpdated : Apr 11, 2018, 01:03 PM IST
ವಾಟ್ಸ್ಆ್ಯಪ್ ಜಗಳ: ಅಡ್ಮಿನ್ ಮೇಲೆ ಹಲ್ಲೆ!

ಸಾರಾಂಶ

ವಾಟ್ಸ್‌ಆ್ಯಪ್ ಗ್ರೂಪ್‌ನ ಅಡ್ಮಿನ್‌ಗಳಿಗಿದು ಎಚ್ಚರಿಕೆಯ ಸುದ್ದಿ! ವಾಟ್ಸ್‌ಆ್ಯಪ್ ಮೆಸೇಜ್‌ವೊಂದರ ಫಲವಾಗಿ ಇತ್ತಂಡಗಳ ನಡುವೆ ಜಗಳ ಸಂಭವಿಸಿ ಕಾರ್ಕಳದಲ್ಲಿ ಗ್ರೂಪ್ ಅಡ್ಮಿನ್ ಮೇಲೆ ಹಲ್ಲೆ ನಡೆದಿದೆ.

ಕಾರ್ಕಳ: ವಾಟ್ಸ್‌ಆ್ಯಪ್ ಗ್ರೂಪ್‌ನ ಅಡ್ಮಿನ್‌ಗಳಿಗಿದು ಎಚ್ಚರಿಕೆಯ ಸುದ್ದಿ! ವಾಟ್ಸ್‌ಆ್ಯಪ್ ಮೆಸೇಜ್‌ವೊಂದರ ಫಲವಾಗಿ ಇತ್ತಂಡಗಳ ನಡುವೆ ಜಗಳ ಸಂಭವಿಸಿ ಕಾರ್ಕಳದಲ್ಲಿ ಗ್ರೂಪ್ ಅಡ್ಮಿನ್ ಮೇಲೆ ಹಲ್ಲೆ ನಡೆದಿದೆ.

ಅಜೆಕಾರು ನಿವಾಸಿ ಅಮೃತೇಶ್ ಶೆಟ್ಟಿ ಹಲ್ಲೆಗೆ ಒಳಗಾದವರು. ಅಮೃತೇಶ್ ಶೆಟ್ಟಿ ಅಡ್ಮಿನ್ ಆಗಿದ್ದ ಗ್ರೂಪ್‌ನಲ್ಲಿ ಕೃಷ್ಣ ಶೆಟ್ಟಿ ಮತ್ತು ವಿಖ್ಯಾತ್ ಶೆಟ್ಟಿ ಎಂಬುವರು ಸದಸ್ಯರಾಗಿದ್ದಾರೆ.

ವೈಯಕ್ತಿಕ ವಿಚಾರಗಳ ಸಂದೇಶ ರವಾನೆಯಾಗುತ್ತಿದೆ ಎನ್ನುವ ಆರೋಪದಡಿ ಅವರ ನಡುವೆ ಜಗಳವಾಗಿದೆ. ಬಳಿಕ ಈ ವಿಚಾರವನ್ನು ಇತ್ಯರ್ಥಪಡಿಸಲು ಅಮೃತೇಶ್ ಶೆಟ್ಟಿ ಕಾರ್ಕಳಕ್ಕೆ ಆಗಮಿಸಿದ್ದಾರೆ.

ಆಗ ಅವರ ಕಾರು ಅಡ್ಡಗಟ್ಟಿ ವಿಜಯ ಸಫಳಿಗ, ಮಹೇಶ್ ಶೆಣೈ ಮತ್ತು ದೀಪು ಎಂಬುವರು ಹಲ್ಲೆ ನಡೆಸಿರುವುದಾಗಿ ಕೇಸು ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Elon Musk : 'ಹಣದಿಂದ ಸಂತೋಷ ಖರೀದಿಸಲು ಸಾಧ್ಯವಿಲ್ಲ' 800 ಬಿಲಿಯನ್ ಡಾಲರ್ ಗಳಿಸಿದ ಶಾಕಿಂಗ್ ಪೋಸ್ಟ್!
Gadag Municipal Council ಗದಗ: ವರ್ಷ ಕಳೆದರೂ ಗದಗ ನಗರಸಭೆ ಸದಸ್ಯರಿಗೆ ಅಧಿಕಾರವಿಲ್ಲ!