ಪ್ರತ್ಯೇಕ ನಾಡಧ್ವಜದ ಬಗ್ಗೆ ಬಿಜೆಪಿ ನಿಲುವೇನು? ಗೊಂದಲದಲ್ಲಿದೆಯಾ ಬಿಜೆಪಿ?

Published : Jul 30, 2017, 07:26 PM ISTUpdated : Apr 11, 2018, 12:47 PM IST
ಪ್ರತ್ಯೇಕ ನಾಡಧ್ವಜದ ಬಗ್ಗೆ ಬಿಜೆಪಿ ನಿಲುವೇನು? ಗೊಂದಲದಲ್ಲಿದೆಯಾ ಬಿಜೆಪಿ?

ಸಾರಾಂಶ

ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ರಾಜ್ಯಧ್ವಜ ವಿನ್ಯಾಸ ಮಾಡಿ, ಕಾನೂನಿನ ಚೌಕಟ್ಟು ನೀಡಲು ರಾಜ್ಯ ಸರ್ಕಾರವೇನೋ ಸಮಿತಿ ರಚಿಸಿದೆ. ಆದರೆ ಈ ಬಗ್ಗೆ ರಾಜ್ಯ ಬಿಜೆಪಿಯ ನಿಲುವೇನು? ಇನ್ನೂ ರಾಜ್ಯ ಬಿಜೆಪಿ ಗೊಂದಲದಲ್ಲಿದೆಯೇ? ಈ ಕುರಿತ ಸವಿವರ ವರದಿ ಇಲ್ಲಿದೆ.

ಬೆಂಗಳೂರು (ಜು.30): ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ರಾಜ್ಯಧ್ವಜ ವಿನ್ಯಾಸ ಮಾಡಿ, ಕಾನೂನಿನ ಚೌಕಟ್ಟು ನೀಡಲು ರಾಜ್ಯ ಸರ್ಕಾರವೇನೋ ಸಮಿತಿ ರಚಿಸಿದೆ. ಆದರೆ ಈ ಬಗ್ಗೆ ರಾಜ್ಯ ಬಿಜೆಪಿಯ ನಿಲುವೇನು? ಇನ್ನೂ ರಾಜ್ಯ ಬಿಜೆಪಿ ಗೊಂದಲದಲ್ಲಿದೆಯೇ? ಈ ಕುರಿತ ಸವಿವರ ವರದಿ ಇಲ್ಲಿದೆ.

ಕರ್ನಾಟಕ ರಾಜ್ಯಕ್ಕೆ ಸಂವಿಧಾನದಲ್ಲಿ ಅವಕಾಶವಿದೆಯೇ ಅನ್ನೋದು ಮೊದಲು ಸ್ಪಷ್ಟವಾಗಲಿ ಎನ್ನುತ್ತಿರುವ ರಾಜ್ಯ ಬಿಜೆಪಿ ನಾಯಕರು, ಈ ಬಗ್ಗೆ ಕಾನೂನು ತಜ್ಞರಿಂದ ರಾಜ್ಯ ಸರ್ಕಾರ ವರದಿ ಪಡೆದು ಸ್ಪಷ್ಟಪಡಿಸಲಿ ಎನ್ನುತ್ತಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.

ಇದು ರಾಜ್ಯ ನಾಯಕರ ಮಾತಾದರೆ ಅತ್ತ ಪ್ರಧಾನಿ ಮೋದಿ ನಾಡಧ್ವಜದ ವಿಚಾರ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಸೇರಿದಂತೆ ವಿವಾದಾಸ್ಪದ ವಿಚಾರಗಳ ಬಗ್ಗೆ ಚರ್ಚಿಸಲು ರಾಜ್ಯ ಬಿಜೆಪಿ ಸಂಸದರ ಸಭೆಯನ್ನು ನಡೆಸಲು ಮುಂದಾಗಿದ್ದಾರೆ.  ನಾಡಧ್ವಜದ ಬಗ್ಗೆ ಸ್ಪಷ್ಟ ನಿಲುವು ತಳೆಯಲು ರಾಜ್ಯ ಬಿಜೆಪಿ ಸಂಸದರ ಜತೆ ಮೋದಿ ಸಭೆ
ಮುಂದಿನ ವಾರ ನಡೆಯಲಿದೆ

ರಾಜ್ಯ ಬಿಜೆಪಿ ಸಂಸದರೊಂದಿಗೆ ಪ್ರಧಾನಮಂತ್ರಿ ಸಭೆ

ನಾಡಧ್ವಜದ ಬಗ್ಗೆ ಬಿಜೆಪಿಯ ನಿಲುವು ಅಂತಿಮಗೊಳಿಸುವುದು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲು ಮುಂದಿನ ವಾರ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಈ ವೇಳೆ ಈ ಬಗ್ಗೆ ಬಿಜೆಪಿ ಸ್ಪಷ್ಟ ನಿಲುವು ಕೈಗೊಂಡು ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಲು ಸಜ್ಜಾಗಿದೆ. ಅಲ್ಲಿಯವರೆಗೂ ಈ ವಿವಾದದ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೇ ಮೌನತಂತ್ರ ಅನುಸರಿಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟ್ರಂಪ್‌ ಸುಂಕಾಸ್ತ್ರದ ಪ್ರಭಾವ, ಗೇಣು ಬಟ್ಟೆಗಾಗಿ ಅಮೆರಿಕದಲ್ಲಿ ಬಡಿದಾಟ ಶುರು!
ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ನೀಡ್ತಿದ್ದ ವ್ಯಕ್ತಿಗೆ ಪೊಲೀಸರ ಕಿರುಕುಳ; ವಿಧಾನಸೌಧ ಮುಂದೆ ವಿಷ ಸೇವನೆ!