ನಮಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವುದೂ ಗೊತ್ತು : BJP ನಾಯಕ

Published : Jul 28, 2019, 10:07 AM IST
ನಮಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವುದೂ ಗೊತ್ತು : BJP ನಾಯಕ

ಸಾರಾಂಶ

ನಮಗೆ ಸರ್ಕಾರ ರಚಿಸುವುದೂ ಗೊತ್ತು. ಉರುಳಿಸುವುದೂ ಗೊತ್ತು ಎಂದು ಬಿಜೆಪಿ ನಾಯಕರೋರ್ವರು ಹೇಳಿದ್ದು, ತಮ್ಮ ಜಿಲ್ಲೆಗೆ ಹೆಚ್ಚಿನ ಮಂತ್ರಿ ಸ್ಥಾನದ ಬೇಡಿಕೆಯನ್ನೂ ಇರಿಸಿದ್ದಾರೆ. 

ಬೆಳಗಾವಿ[ಜು.28] : ಬೆಳಗಾವಿ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗುವಂತವರು ಇದ್ದಾರೆ. ಆದರೆ, ಈವರೆಗೆ ಯಾರೊಬ್ಬರೂ ಮುಖ್ಯಮಂತ್ರಿ ಯಾಗದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ರಾಜಕಾರಣಿಗಳು ಮುಖ್ಯಮಂತ್ರಿಯಾಗುತ್ತಾರೆ ಹೊರತು, ಉಪಮುಖ್ಯಮಂತ್ರಿ ಪಟ್ಟಕ್ಕೆ ಆಸೆಪಡುವವರಲ್ಲ. 

ನಮಗೆ ಡಿಸಿಎಂ ಹುದ್ದೆ ಬೇಡವೇ ಬೇಡ ಎಂದರು. ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವುದು ಗೊತ್ತಿದೆ. ಮೈತ್ರಿ ಸರ್ಕಾರವಷ್ಟೇ ಅಲ್ಲದೇ, ಎಸ್‌.ನಿಜಲಿಂಗಪ್ಪ ಅವರ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ರಾಜಕೀಯ ಪ್ರಾಬಲ್ಯವಿದೆ ಎಂದು ಹೇಳಿದರು.

ಬಿಜೆಪಿ ಮಹಾಸಾಗರವಿದ್ದಂತೆ. ಯಾರೇ ಆಗಲಿ ಪಕ್ಷಕ್ಕೆ ಬಂದರೂ ಅವರನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ಜನತೆಯ ನಿರೀಕ್ಷೆಯಂತೆಯೇ ಮುಖ್ಯಮಂತ್ರಿಯಾಗಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಜಿಲ್ಲೆಗೆ ಐದು ಮಂತ್ರಿಸ್ಥಾನ ಕೊಟ್ಟರೂ ನಮಗೆ ಸಂತಸವಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐದೇ ದಿನದಲ್ಲಿ ವೈಯಕ್ತಿಕವಾಗಿ 223 ಕೋಟಿ ನಷ್ಟ ಕಂಡ ಮುಖೇಶ್‌ ಅಂಬಾನಿ, ಕಾರಣವೇನು?
ಹೆತ್ತವರನ್ನು ಮೊದಲ ಬಾರಿ ವಿಮಾನ ಹತ್ತಿಸಿ ಮಗ ಅತ್ತೇ ಬಿಟ್ಟ! ಜೀವನದಲ್ಲಿ ನೀನು ಗೆದ್ದೆ ಮಗನೇ ಎಂದ ನೆಟ್ಟಿಗರು