ಕೊಲೆ ಕೇಸ್‌ : ಕಾಂಗ್ರೆಸ್ ಮುಖಂಡಗೆ ನೋಟಿಸ್

Published : Jul 28, 2019, 09:52 AM ISTUpdated : Jul 28, 2019, 10:45 AM IST
ಕೊಲೆ ಕೇಸ್‌ :  ಕಾಂಗ್ರೆಸ್ ಮುಖಂಡಗೆ ನೋಟಿಸ್

ಸಾರಾಂಶ

ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಧಾರ​ವಾಡ [ಜು. 28]: ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದ​ಸ್ಯ​ರಾ​ಗಿದ್ದ ಯೋಗೀ​ಶಗೌಡ ​ಗೌಡರ ಕೊಲೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಮಾಜಿ ಸಚಿವ ವಿನಯ ಕುಲ​ಕರ್ಣಿಗೆ 4ನೇ ಹೆಚ್ಚು​ವರಿ ಜಿಲ್ಲಾ ನ್ಯಾಯಾ​ಲ​ಯವು ನೋಟಿಸ್‌ ನೀಡಿದೆ. 

ಅಲ್ಲದೆ, ಕೊಲೆಗೆ ಸಹಕರಿಸಿದ್ದಾರೆನ್ನಲಾದ ಕಾರಿನ ಚಾಲಕ ಮಂಜು​ನಾಥ ಬಸ​ವ​ಣ್ಣ​ ಅವರಿಗೂ ನೋಟಿಸ್‌ ನೀಡಲು ನ್ಯಾಯಾಲಯ ಆದೇಶಿಸಿದೆ. ಕೊಲೆ ಪ್ರಕ​ರ​ಣ​ದಲ್ಲಿ ವಿನಯ ಕುಲ​ಕರ್ಣಿ ಅವರ ಕೈವಾಡ ಇರುವ ಕುರಿತು ಹಲವು ಬಾರಿ ತನಿ​ಖಾ​ಧಿ​ಕಾ​ರಿ​ಗ​ಳಿಗೆ ಮನ​ವ​ರಿಕೆ ಮಾಡಿ​ದರೂ ಪ್ರಯೋ​ಜ​ನ​ವಾ​ಗಿಲ್ಲ. ಆರೋ​ಪಿ​ತರು ಬಳ​ಸಿದ್ದ ಕಾರಿನ ಬಗ್ಗೆಯೂ ತನಿ​ಖಾ​ಧಿ​ಕಾ​ರಿ​ಗಳು ಗಂಭೀ​ರ​ವಾಗಿ ಪರಿ​ಗ​ಣಿ​ಸಿಲ್ಲ. 

ಪ್ರಕ​ರ​ಣ​ವನ್ನು ಮುಚ್ಚಿ ಹಾಕಲು ಪ್ರಯ​ತ್ನಿ​ಸ​ಲಾ​ಗು​ತ್ತಿದೆ. ಆದ್ದ​ರಿಂದ ವಿನಯ ಕುಲ​ಕರ್ಣಿ ಹಾಗೂ ಕಾರು ಚಾಲಕ ಮಂಜು​ನಾಥ ಅವ​ರನ್ನು ಹೆಚ್ಚು​ವರಿ ಆರೋ​ಪಿ​ಗ​ಳಾಗಿ ಮಾಡ​ಬೇ​ಕೆಂದು ಯೋಗೀಶಗೌಡ ಸಹೋ​ದರ ಗುರು​ನಾಥ ಗೌಡ ಜಿಲ್ಲಾ ನ್ಯಾಯಾ​ಲ​ಯಕ್ಕೆ ಮಧ್ಯಂತರ ಅರ್ಜಿ ಸಲ್ಲಿ​ಸಿ​ದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕ​ರ​ಣ​ದ ಸಂತ್ರ​ಸ್ತ​ರಿಗೆ ತಮ್ಮ ಅಭಿ​ಪ್ರಾಯ ಹಾಗೂ ಸಂಶ​ಯ​ಗ​ಳನ್ನು ಹೇಳಿ​ಕೊ​ಳ್ಳಲು ಅವ​ಕಾ​ಶ​ವಿದೆ ಎಂದು ತಿಳಿಸಿ, ವಿನಯ ಕುಲ​ಕರ್ಣಿ ಹಾಗೂ ಮಂಜು​ನಾಥ ಅವ​ರಿಗೆ ನೋಟಿಸ್‌ ಜಾರಿ ಮಾಡಲು ಆದೇ​ಶಿ​ಸಿ​ದರು. ಅರ್ಜಿ​ದಾ​ರರ ಪರ ನ್ಯಾಯ​ವಾದಿ ದೀಪಕ ಶೆಟ್ಟಿವಕಾ​ಲತ್ತು ವಹಿ​ಸಿ​ದ್ದರು.

ಹೆಚ್ಚು​ವರಿ ಆರೋ​ಪಿ​ಗಳಾಗಿ ಸೇರ್ಪಡೆ ಬೇಡ ಎಂದು ಆರೋ​ಪಿ​ತರ ಪರ ಹಾಗೂ ಸರ್ಕಾರಿ ವಕೀ​ಲರು ಆಕ್ಷೇಪ ವ್ಯಕ್ತ​ಪ​ಡಿ​ಸಿ​ದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋವಾ, ಕೇರಳ ಮಾದರಿಯಲ್ಲಿ ಕರ್ನಾಟಕ ಕರಾವಳಿ ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ; ಡಿ.ಕೆ. ಶಿವಕುಮಾರ್
ಚಿನ್ನದ ಹೂಡಿಕೆ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ತಿಳಿದುಕೊಳ್ಳಬೇಕಾದ 4 ಅತ್ಯುತ್ತಮ ವಿಧಾನಗಳು