ಕೊಲೆ ಕೇಸ್‌ : ಕಾಂಗ್ರೆಸ್ ಮುಖಂಡಗೆ ನೋಟಿಸ್

By Web DeskFirst Published Jul 28, 2019, 9:52 AM IST
Highlights

ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಧಾರ​ವಾಡ [ಜು. 28]: ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದ​ಸ್ಯ​ರಾ​ಗಿದ್ದ ಯೋಗೀ​ಶಗೌಡ ​ಗೌಡರ ಕೊಲೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಮಾಜಿ ಸಚಿವ ವಿನಯ ಕುಲ​ಕರ್ಣಿಗೆ 4ನೇ ಹೆಚ್ಚು​ವರಿ ಜಿಲ್ಲಾ ನ್ಯಾಯಾ​ಲ​ಯವು ನೋಟಿಸ್‌ ನೀಡಿದೆ. 

ಅಲ್ಲದೆ, ಕೊಲೆಗೆ ಸಹಕರಿಸಿದ್ದಾರೆನ್ನಲಾದ ಕಾರಿನ ಚಾಲಕ ಮಂಜು​ನಾಥ ಬಸ​ವ​ಣ್ಣ​ ಅವರಿಗೂ ನೋಟಿಸ್‌ ನೀಡಲು ನ್ಯಾಯಾಲಯ ಆದೇಶಿಸಿದೆ. ಕೊಲೆ ಪ್ರಕ​ರ​ಣ​ದಲ್ಲಿ ವಿನಯ ಕುಲ​ಕರ್ಣಿ ಅವರ ಕೈವಾಡ ಇರುವ ಕುರಿತು ಹಲವು ಬಾರಿ ತನಿ​ಖಾ​ಧಿ​ಕಾ​ರಿ​ಗ​ಳಿಗೆ ಮನ​ವ​ರಿಕೆ ಮಾಡಿ​ದರೂ ಪ್ರಯೋ​ಜ​ನ​ವಾ​ಗಿಲ್ಲ. ಆರೋ​ಪಿ​ತರು ಬಳ​ಸಿದ್ದ ಕಾರಿನ ಬಗ್ಗೆಯೂ ತನಿ​ಖಾ​ಧಿ​ಕಾ​ರಿ​ಗಳು ಗಂಭೀ​ರ​ವಾಗಿ ಪರಿ​ಗ​ಣಿ​ಸಿಲ್ಲ. 

ಪ್ರಕ​ರ​ಣ​ವನ್ನು ಮುಚ್ಚಿ ಹಾಕಲು ಪ್ರಯ​ತ್ನಿ​ಸ​ಲಾ​ಗು​ತ್ತಿದೆ. ಆದ್ದ​ರಿಂದ ವಿನಯ ಕುಲ​ಕರ್ಣಿ ಹಾಗೂ ಕಾರು ಚಾಲಕ ಮಂಜು​ನಾಥ ಅವ​ರನ್ನು ಹೆಚ್ಚು​ವರಿ ಆರೋ​ಪಿ​ಗ​ಳಾಗಿ ಮಾಡ​ಬೇ​ಕೆಂದು ಯೋಗೀಶಗೌಡ ಸಹೋ​ದರ ಗುರು​ನಾಥ ಗೌಡ ಜಿಲ್ಲಾ ನ್ಯಾಯಾ​ಲ​ಯಕ್ಕೆ ಮಧ್ಯಂತರ ಅರ್ಜಿ ಸಲ್ಲಿ​ಸಿ​ದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕ​ರ​ಣ​ದ ಸಂತ್ರ​ಸ್ತ​ರಿಗೆ ತಮ್ಮ ಅಭಿ​ಪ್ರಾಯ ಹಾಗೂ ಸಂಶ​ಯ​ಗ​ಳನ್ನು ಹೇಳಿ​ಕೊ​ಳ್ಳಲು ಅವ​ಕಾ​ಶ​ವಿದೆ ಎಂದು ತಿಳಿಸಿ, ವಿನಯ ಕುಲ​ಕರ್ಣಿ ಹಾಗೂ ಮಂಜು​ನಾಥ ಅವ​ರಿಗೆ ನೋಟಿಸ್‌ ಜಾರಿ ಮಾಡಲು ಆದೇ​ಶಿ​ಸಿ​ದರು. ಅರ್ಜಿ​ದಾ​ರರ ಪರ ನ್ಯಾಯ​ವಾದಿ ದೀಪಕ ಶೆಟ್ಟಿವಕಾ​ಲತ್ತು ವಹಿ​ಸಿ​ದ್ದರು.

ಹೆಚ್ಚು​ವರಿ ಆರೋ​ಪಿ​ಗಳಾಗಿ ಸೇರ್ಪಡೆ ಬೇಡ ಎಂದು ಆರೋ​ಪಿ​ತರ ಪರ ಹಾಗೂ ಸರ್ಕಾರಿ ವಕೀ​ಲರು ಆಕ್ಷೇಪ ವ್ಯಕ್ತ​ಪ​ಡಿ​ಸಿ​ದ್ದರು.

click me!