ಹೆಸರು ಹೇಳದೆ ರೇವಣ್ಣ ಪಾಟಿ ಸವಾಲು ಹಾಕಿದ್ದು ಯಾರಿಗೆ?

Published : Jun 15, 2018, 06:42 PM ISTUpdated : Jun 15, 2018, 06:45 PM IST
ಹೆಸರು ಹೇಳದೆ ರೇವಣ್ಣ ಪಾಟಿ ಸವಾಲು ಹಾಕಿದ್ದು ಯಾರಿಗೆ?

ಸಾರಾಂಶ

ಮೈತ್ರಿ ಸರಕಾರದಲ್ಲಿ ಪ್ರಮುಖ ಸಚಿವರಿಬ್ಬರ ಕಿತ್ತಾಟ ಮುಂದುವರಿದಿದ್ದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಸವಾಲು ಹಾಕಿದ್ದಾರೆ.  

ಹಾಸನ ಜೂನ್ 15: ಮೈತ್ರಿ ಸರಕಾರದಲ್ಲಿ ಪ್ರಮುಖ ಸಚಿವರಿಬ್ಬರ ಕಿತ್ತಾಟ ಮುಂದುವರಿದಿದ್ದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಸವಾಲು ಹಾಕಿದ್ದಾರೆ.

ನಾನು ಜಲಸಂಪನ್ಮೂಲ ಇಲಾಖೆಯಲ್ಲಿ ಹಸ್ತಕ್ಷೇಪ  ಮಾಡಿದ್ದರೆ ನನ್ನನ್ನು ಕರೆಸಿ ಮಾತನಾಡಿ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಅವರಿಗೆ ರೇವಣ್ಣ ಮನವಿ ಸಹ ಮಾಡಿಕೊಂಡಿದ್ದಾರೆ. ಮನವಿ ಮಾಡಿಕೊಳ್ಳುವುದರೊಂದಿಗೆ ವ್ಯಂಗವಾಗಿ ಮಾತನಾಡಿರುವ ರೇವಣ್ಣ ಹಸ್ತಕ್ಷೇಪ ಮಾಡಿ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದೇನೆ ಎಂದಾದರೂ ಹೇಳಿ ಎಂದಿದ್ದಾರೆ.

ವರ್ಗಾವಣೆ ಮಾಡಲು ನಾನು‌ ಸಿಎಂ ಗೆ ಯಾವ ಅರ್ಜಿ ಕೊಟ್ಟಿದ್ದೇನೆ ಹೇಳಲಿ. ನನಗೂ ಸ್ವಾಭಿಮಾನ ಇದೆ, ನನ್ನನ್ನು ಬ್ಲಾಕ್ ಮೇಲ್ ಮಾಡಿದ್ರೆ ಹೆದರಿ ಓಡಿ ಹೋಗಲ್ಲ ಎಂದು ಡಿಕೆಶಿಗೆ ಪರೋಕ್ಷವಾಗಿ ಹೆಸರು ಹೇಳದೇ ತಿರುಗೇಟು ನೀಡಿದ್ದಾರೆ.

ಡಿಕೆಶಿ ವಿಚಾರದಲ್ಲಿ ನಾನು ಮಾತನಾಡಲ್ಲ ಎಂದ ರೇವಣ್ಣ

ಸರಕಾರ ಸರಿಯಾಗಿ ನಡೆಯಬಾರದು ಎಂದು ಮಾಧ್ಯಮಗಳು ಬೇಕಂತಲೇ ಇಂಥ ವರದಿ ಪ್ರಸಾರ ಮಾಡುತ್ತಿವೆ ಎಂದು ರೇವಣ್ಣ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರಕಾರದಲ್ಲಿ ಸಚಿವರ ನಡುವಿನ ವಾಗ್ಯುದ್ಧಕ್ಕೆ ಫುಲ್ ಸ್ಟಾಪ್ ಬೀಳುವ ಲಕ್ಷಣ ಗೋಚರವಾಗುತ್ತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ನೀವು ಕರಾವಳಿಯವರು ಬೆಂಕಿ ಹಚ್ಚೋರು'- ಸಚಿವ ಬೈರತಿ ಸುರೇಶ್; ಶಾಸಕ ಸುನೀಲ್ ಕುಮಾರ್ ಆಕ್ರೋಶ
ಚಾಮರಾಜನಗರ: ಕೂಲಿ ಕೆಲಸ ಮುಗಿಸಿ ವಾಪಾಸ್ ಹೋಗುವ ವೇಳೆ ಕಾಡಾನೆ ದಾಳಿ; ವ್ಯಕ್ತಿ ದುರ್ಮರಣ