ಸಚಿವ ಸ್ಥಾನ ಪ್ರತಿಭಟನೆ ವೇಳೆ ಪೇದೆಗೆ ತಗುಲಿದ ಬೆಂಕಿ

Published : Jun 15, 2018, 06:04 PM ISTUpdated : Jun 15, 2018, 06:06 PM IST
ಸಚಿವ ಸ್ಥಾನ ಪ್ರತಿಭಟನೆ ವೇಳೆ ಪೇದೆಗೆ ತಗುಲಿದ ಬೆಂಕಿ

ಸಾರಾಂಶ

ಪ್ರತಿಭಟನೆ ನಡೆಸುವಾಗ ಬೆಂಕಿ ಹಚ್ಚುವುದು, ಬ್ಯಾರಿಕೇಡ್ ಮುರಿಯುವುದು ಸರ್ವೇ ಸಾಮಾನ್ಯ. ಪ್ರತಿಭನಾಕಾರರು ಹಚ್ಚಿದ ಬೆಂಕಿ ನಂದಿಸಲು ಹೋದ ಪೊಲೀಸ್ ಪೇದೆಯೊಬ್ಬರಿಗೆ ಬೆಂಕಿ ತಗುಲಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕಲಬುರಗಿ ಜೂನ್ 15:ಪ್ರತಿಭಟನೆ ನಡೆಸುವಾಗ ಬೆಂಕಿ ಹಚ್ಚುವುದು, ಬ್ಯಾರಿಕೇಡ್ ಮುರಿಯುವುದು ಸರ್ವೇ ಸಾಮಾನ್ಯ. ಪ್ರತಿಭನಾಕಾರರು ಹಚ್ಚಿದ ಬೆಂಕಿ ನಂದಿಸಲು ಹೋದ ಪೊಲೀಸ್ ಪೇದೆಯೊಬ್ಬರಿಗೆ ಬೆಂಕಿ ತಗುಲಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಮಾದಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೇದೆಗೆ ಅಪಾಯ ಎದುರಾಗಿತ್ತು. ಮಾದಿಗ ಸಮನ್ವಯ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಿಯಂತ್ರಣಕ್ಕೆ ಧಾವಿಸಿದ ಪೊಲೀಸ್ ಪೇದೆಗೆ ಬೆಂಕಿ ತಗಲುವುದರಲ್ಲಿತ್ತು.

ಬೆಂಕಿ ಹೊತ್ತಿಕೊಳ್ಳಲುಮ ಏನು ಕಾರಣ? ಟೈರ್ ಗೆ ಹಾಕಿದ್ದ ಬೆಂಕಿ ಜೋರಾಗಿ ಗಾಳಿ ಬೀಸಿದ್ದರಿಂದ ಹರಡಲು ಆರಂಭಿಸಿದೆ. ಹತ್ತಿರದಲ್ಲಿಯೇ ಇದ್ದ ಪೊಲೀಸ್ ಪೇದೆ ಬೆಂಕಿಗೆ ಆಹುತಿಯಾಗುವ ಅಪಾಯ ಎದುರಾಗಿದೆ. ತಕ್ಷಣ ಪ್ರತಿಭಟನಾಕಾರು ಬೆಂಕಿ ನಂದಿಸಿದ ಪರಿಣಾಮ ಭಾರಿ ಅನಾಹುತ ತಪ್ಪಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!
KPTCL ಕೆಲಸ, ಶನಿವಾರ ಬೆಂಗಳೂರಲ್ಲಿ ಕರೆಂಟ್‌ ಇರಲ್ಲ..!