ಕುವೆಂಪು ಅವರ ಬಾಯಲ್ಲೇ ವಿಶ್ವ ಮಾನವ ಸಂದೇಶ ಕೇಳಿ

Published : Aug 27, 2018, 03:02 PM ISTUpdated : Sep 09, 2018, 09:20 PM IST
ಕುವೆಂಪು ಅವರ ಬಾಯಲ್ಲೇ ವಿಶ್ವ ಮಾನವ ಸಂದೇಶ ಕೇಳಿ

ಸಾರಾಂಶ

ರಾಷ್ಟ್ರಕವಿ ಕುವೆಂಪು ಅವರ ಈ ಗೀತೆಯನ್ನು, ವಿಶ್ವ ಮಾನವ ಸಂದೇಶವನ್ನು ಕೇಳದ, ಕೇಳಿ ಅನುಭವಿಸದ ಕನ್ನಡಿಗರು ಯಾರಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಧ್ವನಿಯಲ್ಲಿಯೇ ಈ ಗೀತೆಯನ್ನು ಕೇಳಿದ್ದೀರಾ? ಕೇಳದಿದ್ದರೆ ಇಲ್ಲಿದೆ ನೋಡಿ ಮಹಾಕವಿಯೇ ವಾಚಿಸಿದ ಕವನಾಮೃತ...

ಓ ನನ್ನ ಚೇತನ, ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ, ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ, ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ, ಆಗು ನೀ ಅನಿಕೇತನ!

ರಾಷ್ಟ್ರಕವಿ ಕುವೆಂಪು ಅವರ ಈ ಗೀತೆಯನ್ನು, ವಿಶ್ವ ಮಾನವ ಸಂದೇಶವನ್ನು ಕೇಳದ, ಕೇಳಿ ಅನುಭವಿಸದ ಕನ್ನಡಿಗರು ಯಾರಿದ್ದಾರೆ. ಅದೆಷ್ಟು ವೇದಿಕೆಗಳಲ್ಲಿ ಈ ಗೀತೆಯ ಆನಂದವನ್ನು ಪಡೆದುಕೊಂಡಿದ್ದೇವೆಯೋ ಲೆಕ್ಕವೇ ಇಲ್ಲ. ಆದರೆ ರಾಷ್ಟ್ರಕವಿ ಕುವೆಂಪು ಅವರ ಧ್ವನಿಯಲ್ಲಿಯೇ ಈ ಗೀತೆಯನ್ನು ಕೇಳಿದ್ದೀರಾ? ಕೇಳದಿದ್ದರೆ ಇಲ್ಲಿದೆ ನೋಡಿ ಮಹಾಕವಿಯೇ ವಾಚಿಸಿದ ಕವನಾಮೃತ...

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಶ್ ಸೋಲಿಸ್ತಾರಾ ರಣವೀರ್.. ಬ್ಲಾಕ್ ಬಸ್ಟರ್ 'KGF 2' ಬೀಟ್ ಮಾಡಲಿದ್ಯಾ ರಣವೀರ್ "ಧುರಂಧರ್..?
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ