ಸಂಜಯ್ ದತ್ ವಿರುದ್ಧ ಜಾಮೀನು ರಹಿತ ವಾರಂಟ್

Published : Apr 16, 2017, 06:44 AM ISTUpdated : Apr 11, 2018, 12:57 PM IST
ಸಂಜಯ್ ದತ್ ವಿರುದ್ಧ ಜಾಮೀನು ರಹಿತ ವಾರಂಟ್

ಸಾರಾಂಶ

ನಿರ್ಮಾಪಕ ಶಕೀಲ್‌ ನೂರಾನಿ ಸಲ್ಲಿಸಿದ್ದ ಬೆದರಿಕೆ ಪ್ರಕರಣದ ವಿಚಾರಣೆಗೆ ಹಾಜರಾಗದ್ದಕ್ಕೆ ದತ್‌ ಅವರಿಗೆ ಕೋರ್ಟ್‌ ಈ ವಾರಂಟ್‌ ಜಾರಿ ಮಾಡಿದೆ.

ಮುಂಬೈ(ಏ.16): ನಟ ಸಂಜಯ್‌ ದತ್‌ ವಿರುದ್ಧ ಸ್ಥಳೀಯ ಕೋರ್ಟ್‌ ಬಂಧನ ವಾರಂಟ್‌ ಜಾರಿ ಮಾಡಿದೆ.

ನಿರ್ಮಾಪಕ ಶಕೀಲ್‌ ನೂರಾನಿ ಸಲ್ಲಿಸಿದ್ದ ಬೆದರಿಕೆ ಪ್ರಕರಣದ ವಿಚಾರಣೆಗೆ ಹಾಜರಾಗದ್ದಕ್ಕೆ ದತ್‌ ಅವರಿಗೆ ಕೋರ್ಟ್‌ ಈ ವಾರಂಟ್‌ ಜಾರಿ ಮಾಡಿದೆ.

2002ರಲ್ಲಿ ತಮ್ಮ ನಿರ್ಮಾಣದ ‘ಜಾನ್‌ ಕೀ ಬಾಜಿ' ಚಿತ್ರದ ಅಭಿನಯಕ್ಕಾಗಿ ಸಂಜಯ್‌ ದತ್‌ ಹಣ ಪಡೆ​ದಿದ್ದು, ಆ ಹಣ ವಾಪಸ್‌ ನೀಡದೇ, ಚಿತ್ರೀಕರಣಕ್ಕೆ ಅರ್ಧದಲ್ಲೇ ಕೈಕೊಟ್ಟಿದ್ದಾರೆ ಎಂದು ನಿರ್ಮಾಪಕ ನೂರಾನಿ ದೂರಿದ್ದರು.

ಈ ಬಗ್ಗೆ ಭಾರತೀಯ ಮೋಷನ್‌ ಪಿಕ್ಚರ್ಸ್‌ ಪ್ರೊಡ್ಯೂಸರ್ಸ್‌ ಅಸೋಸಿ​ಯೇಷನ್‌ ಸಹ ನೂರಾನಿ ಅವರಿಗೆ ಹಣ ಮರಳಿಸುವಂತೆ ದತ್‌ಗೆ ಸೂಚಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೈಋತ್ಯ ರೈಲ್ವೆಯಲ್ಲಿ ವಂದೇ ಭಾರತ್ ಹವಾ, ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ, ಆದಾಯದಲ್ಲೂ ಚಾಕ್‌ಪಾಟ್‌!
ಮಾನವೀಯ ಸೇವೆಯ ಹೊಸ ಹೆಜ್ಜೆ.. ನೆಲಮಂಗಲದಲ್ಲಿ 'ನೆಮ್ಮದಿ' ಪ್ಯಾಲಿಯೇಟಿವ್ ಸೆಂಟರ್ ಶುಭಾರಂಭ