’ಬಂಗಾಳಕ್ಕೆ ಬರುವವರು ಬಂಗಾಳಿ ಕಲಿಯಲೇಬೇಕು’

Published : Jun 15, 2019, 07:53 AM IST
’ಬಂಗಾಳಕ್ಕೆ ಬರುವವರು ಬಂಗಾಳಿ ಕಲಿಯಲೇಬೇಕು’

ಸಾರಾಂಶ

ನಾವು ದೆಹಲಿ, ಬಿಹಾರ, ಪಂಜಾಬ್‌ ಹಾಗೂ ಉತ್ತರ ಪ್ರದೇಶಕ್ಕೆ ಹೋದಾಗ, ಆಯಾ ರಾಜ್ಯಗಳ ಭಾಷೆಯನ್ನೇ ಮಾತನಾಡುತ್ತೇನೆ| ಬಂಗಾಳಕ್ಕೆ ಬರುವವರು ಬಂಗಾಳಿ ಕಲಿಯಲೇಬೇಕು: ದೀದಿ

ಕಂಚ್ರಾಪಾರ[ಜೂ.15]: ಪಶ್ಚಿಮ ಬಂಗಾಳಕ್ಕೆ ಬಂದು ನೆಲೆಸುವ ಪ್ರತಿಯೊಬ್ಬ ನಾಗರಿಕ ಸಹ ಬಂಗಾಳಿಯನ್ನು ಕಲಿಯಲೇಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೂಚಿಸಿದ್ದಾರೆ.

ಶುಕ್ರವಾರ ಇಲ್ಲಿನ ಪಕ್ಷದ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ ಅವರು, ‘ಯಾವುದೇ ಕಾರಣಕ್ಕೂ ನಾವು ಪಶ್ಚಿಮ ಬಂಗಾಳವನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ತವರೂರಾದ ಗುಜರಾತ್‌ ಆಗಲು ಬಿಡುವುದಿಲ್ಲ. ಬಂಗಾಳದಲ್ಲೇ ಬಂಗಾಳಿಗಳಿಗೆ ನೆಲೆ ಇಲ್ಲದಂಥ ಸ್ಥಿತಿಯನ್ನು ಎಂದಿಗೂ ಬಾರದಂತೆ ನೋಡಿಕೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

ನಾವು ದೆಹಲಿ, ಬಿಹಾರ, ಪಂಜಾಬ್‌ ಹಾಗೂ ಉತ್ತರ ಪ್ರದೇಶಕ್ಕೆ ಹೋದಾಗ, ಆಯಾ ರಾಜ್ಯಗಳ ಭಾಷೆಯನ್ನೇ ಮಾತನಾಡುತ್ತೇನೆ. ಹಾಗೆಯೇ ಬಂಗಾಳಕ್ಕೆ ಬರುವವರೆಲ್ಲರೂ ಬಂಗಾಳಿ ಭಾಷೆ ಕಲಿಯಲೇಬೇಕು. ಹೊರಗಿನವರು ಬಂದು ಬಂಗಾಳಿಗಳ ಮೇಲೆ ದಬ್ಬಾಳಿಕೆ ನಡೆಸಲು ನಾವು ಬಿಡುವುದಿಲ್ಲ ಎಂದು ಇದೇ ವೇಳೆ ಬ್ಯಾನರ್ಜಿ ಗುಡುಗಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ