ಭಾರತಕ್ಕೆ ವಾಪಸ್ಸಾಗಲು ಇಚ್ಚಿಸುತ್ತೇನೆ ಎಂದ ವಿಜಯ್ ಮಲ್ಯ

Published : Sep 09, 2016, 12:23 PM ISTUpdated : Apr 11, 2018, 01:06 PM IST
ಭಾರತಕ್ಕೆ ವಾಪಸ್ಸಾಗಲು ಇಚ್ಚಿಸುತ್ತೇನೆ ಎಂದ ವಿಜಯ್ ಮಲ್ಯ

ಸಾರಾಂಶ

ನವದೆಹಲಿ (ಸೆ.09): ಭಾರತಕ್ಕೆ ವಾಪಸ್ಸಾಗಲು ಇಚ್ಚೆಯಿದೆ ಎಂದು ಉದ್ಯಮಿ ವಿಜಯ್ ಮಲ್ಯ ಇಂದು ದೆಹಲಿ ನ್ಯಾಯಾಲಯಕ್ಕೆ ಹೇಳಿದ್ದಾರೆ. ಆದರೆ ಅವರ ಪಾಸ್ ಪೋರ್ಟನ್ನು ಸರ್ಕಾರ ರದ್ದುಗೊಳಿಸಿದ್ದರಿಂದ ವಾಪಸ್ಸಾಗಲು ಸಾಧ್ಯವಾಗುತ್ತಿಲ್ಲ ಎಂದು ಮಲ್ಯ ದೆಹಲಿ ನ್ಯಾಯಾಲಯಕ್ಕೆ ಕೇಳಿಕೊಂಡಿದ್ದಾರೆ.

ರೂ. 9,000 ಕೋಟಿ ಸಾಲ ಭಾರವನ್ನು ಹೊತ್ತಿರುವ ಮಲ್ಯ ಇದುವರೆಗೂ ಕೋರ್ಟ್ ವಿಚಾರಣೆಗೆ ಹಾಜರಾಗದೇ ಇಂಗ್ಲೆಂಡ್ ಗೆ ಹಾರಿದ್ದರು. ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದರೂ ಹಾಜರಾಗಿರಲಿಲ್ಲ. ಹಾಗಾಗಿ  ಮುಂಬೈ ನ್ಯಾಯಾಲಯ ಜಾಮೀನು ರಹಿತ ವಾರೆಂಟನ್ನು ಜಾರಿಗೊಳಿಸಿತ್ತು. ಅವರ ಪಾಸ್ ಪೋರ್ಟನ್ನು ಸರ್ಕಾರ ಹಿಂತೆಗೆದುಕೊಂಡಿತ್ತು.

ಇದೀಗ ಮಲ್ಯ ಭಾರತಕ್ಕೆ ಮರಳಲು ಸಿದ್ಧವಿರುವುದಾಗಿ ಹೇಳಿದ್ದಾರೆ. “ನನ್ನ ಮೇಲಿರುವ ಸಾಲವನ್ನು ತೀರಿಸಲು ಸಿದ್ಧವಿದ್ದೇನೆ. ಆದರೆ ಪಾಸ್ ಪೋರ್ಟ್ ರದ್ದಾಗಿರುವುದರಿಂದ ಮರಳಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ.a

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ